Sunday, May 19, 2024
Homeಸುದ್ದಿರಾಜ್ಯ5 ಕೆಜಿಗೆ ಅಕ್ಕಿ , ಉಳಿದ 5 ಕೆಜಿಗೆ ಹಣ -ರಾಜ್ಯ ಸರ್ಕಾರ ಘೋಷಣೆ

5 ಕೆಜಿಗೆ ಅಕ್ಕಿ , ಉಳಿದ 5 ಕೆಜಿಗೆ ಹಣ -ರಾಜ್ಯ ಸರ್ಕಾರ ಘೋಷಣೆ

ಬೆಂಗಳೂರು : ಹೆಚ್ಚುವರಿ ಅಕ್ಕಿ ಹೊಂದಿಸಲು ವಿಫಲವಾಗಿರುವ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ತಾವು ಘೋಷಣೆ ಮಾಡಿದಂತೆ ಅನ್ನಭಾಗ್ಯ ಯೋಜನೆಯನ್ನು ಅನುಷ್ಠಾನ ಮಾಡಲು ದೃಢ ನಿರ್ಧಾರ ತೆಗೆದುಕೊಂಡಿದೆ. ಅದರಂತೆ ಈಗ ಪ್ರತಿ ಬಿಪಿಎಲ್ ಕಾರ್ಡ್ಗೆ ಲಭ್ಯವಿರುವ 5 ಕೆಜಿ ಅಕ್ಕಿಯನ್ನು ಕೊಡುವುದರ ಜೊತೆಗೆ ಉಳಿದ ಐದು ಕೆಜೆಗೆ ಹಣವನ್ನು ನೀಡಲು ನಿರ್ಧರಿಸಿದೆ.

ಪ್ರತಿ ಒಂದು ಕೆಜಿ ಅಕ್ಕಿಗೆ 34 ರೂಪಾಯಿಯಂತೆ ಉಳಿದ ಐದು ಕೆಜಿಗೆ ಹಣವನ್ನು ನೀಡಲಿದೆ. ಈ ಮೂಲಕ ತಾವು ಘೋಷಣೆ ಮಾಡಿದಂತೆ ಅನ್ನಭಾಗ್ಯ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ದೃಢ ನಿರ್ಧಾರ ತೆಗೆದುಕೊಂಡಿದೆ.

ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆದಿತ್ತು. ಈ ಸಭೆಯಲ್ಲಿ ಐದು ಕೆಜಿ ಅಕ್ಕಿ ಬದಲಾಗಿ ಹಣವನ್ನು ನೀಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸಂಪುಟ ಸಭೆ ಬೆನ್ನಲ್ಲೇ, ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ.. ಪಿಯೂಸ್ ಗೋಯಲ್ರನ್ನು ಭೇಟಿಯಾಗಿ ಅಕ್ಕಿ ನೀಡಿ ಎಂದು ಒತ್ತಾಯ ಮಾಡಿದ್ದೆ. 15 ಲಕ್ಷ ಟನ್ ಅಕ್ಕಿಯನ್ನ ಕೆಜಿಗೆ 34 ರೂಪಾಯಿ ನೀಡ್ತೇವೆ ಎಂದರೂ ಕೊಡಲಿಲ್ಲ. 34 ರೂಪಾಯಿ ನೀಡುವ ವಿಚಾರಕ್ಕೆ ಯಾರೂ ಮುಂದೆ ಬರಲಿಲ್ಲ. ಅಕ್ಕಿ ದಾಸ್ತಾನು ಖಾಲಿ ಆಗುವರೆಗೆ ಕೆಜಿಗೆ 34 ರೂಪಾಯಿ ನೀಡಲು ತೀರ್ಮಾನ ಮಾಡಿದ್ದೇವೆ ಎಂದರು.

ಒಬ್ಬ ವ್ಯಕ್ತಿಗೆ ತಿಂಗಳಿಗೆ 170 ರೂಪಾಯಿ

ರಾಜ್ಯ ಸರ್ಕಾರದ ನಿರ್ಧಾರದಂತೆ ಐದು ಕೆಜಿಗೆ 170 ರೂಪಾಯಿಯನ್ನು ನೀಡಲಿದೆ. ಯಜಮಾನನ ಖಾತೆಗೆ ಸಂದಾಯ ಆಗುವ ಹಣವು ಮನೆಯಲ್ಲಿ ಎಷ್ಟು ಸದಸ್ಯರು ಇದ್ದಾರೆ ಅನ್ನೋದರ ಮೇಲೆ ಅವಲಂಬಿತವಾಗಲಿದೆ. ಪ್ರತಿ ಸದಸ್ಯನಿಗೆ 170 ರೂಪಾಯಿ ಸಿಗಲಿದ್ದು, ಇಬ್ಬರು ಸದಸ್ಯರಿದ್ದರೆ  340 ರೂಪಾಯಿ ಸಿಗಲಿದೆ.

ಇದು ತಾತ್ಕಾಲಿಕ ವ್ಯವಸ್ಥೆ

ಬಿಪಿಎಲ್ ಕಾರ್ಡ್ ಯಾರ ಹೆಸರಲ್ಲಿ ಇರುತ್ತದೆಯೋ, ಅವರ ಖಾತೆಗೆ ನಾವು ಹಣ ಸಂದಾಯ ಮಾಡುತ್ತೇವೆ. ಜುಲೈ 1ರಿಂದ ಹಣ ಸಂದಾಯ ಆಗಲಿದೆ. ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಜೂನ್ 12 ರಂದು ಹೆಚ್ಚುವರಿ ಅಕ್ಕಿಯನ್ನು ಕೊಡುತ್ತೇವೆ ಎಂದಿತ್ತು. ಆದರೆ ಮೇ 13 ರಂದು ಅಕ್ಕಿ ಕೊಡಲು ಆಗಲ್ಲ ಅಂತಾ ಹೇಳಿದೆ. ಈ ಮೂಲಕ ಕೇಂದ್ರ ಸರ್ಕಾರ ಬಡ ಜನರಿಗೆ ದ್ರೋಹ ಮಾಡಿದೆ. ನಮ್ಮ ಮಾತು ಉಳಿಸಿಕೊಂಡು, ಗ್ಯಾರೆಂಟಿ ಜಾರಿ ಮಾಡಿದ್ದೇವೆ. ಇದು ತಾತ್ಕಾಲಿಕ ವ್ಯವಸ್ಥೆ. ಮುಂದೆ ಅಕ್ಕಿ ನೀಡ್ತೇವೆ ಅಂತಾ ಭರವಸೆ ನೀಡಿದರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News