‘ದಿ ಕೇರಳ ಸ್ಟೋರಿ’ ಸಿನಿಮಾದ ನಟಿ ಅದಾ ಶರ್ಮಾ, ನಿರ್ದೇಶಕರ ವಾಹನ ಅಪಘಾತ

ಮುಂಬೈ,ಮೇ15:’ದಿ ಕೇರಳ ಸ್ಟೋರಿ’ ಸಿನಿಮಾದ ನಟಿ ಅದಾ ಶರ್ಮಾ ಮತ್ತು ನಿರ್ದೇಶಕ ಸುದೀಪ್ತೋ ಸೇನ್ ಸಂಚರಿಸುತ್ತಿದ್ದ ಕಾರಿಗೆ ರಸ್ತೆ ಅಪಘಾತ ನಡೆದಿದೆ ಎಂದು ವರದಿಯಾಗಿದೆ.

ಅದಾ ಶರ್ಮಾ ಮತ್ತು ‘ದಿ ಕೇರಳ ಸ್ಟೋರಿ’ ಚಿತ್ರತಂಡವು ಕರೀಂನಗರದಲ್ಲಿ ಹಿಂದೂ ಏಕತಾ ಯಾತ್ರೆಗೆ ತೆರಳುತ್ತಿದ್ದ ವೇಳೆ ರಸ್ತೆ ಅಪಘಾತ ನಡೆದಿದ್ದು, ಅಪಘಾತದ ಬಳಿಕ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು.

ಇನ್ನು ಸಿನಿಮಾದ ಕುರಿತು ಮಾತನಾಡಲು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಅದಾ ಮತ್ತು ಸುದೀಪ್ತೋ ಇಬ್ಬರಿಗೂ ವೈದ್ಯಕೀಯ ನೆರವು ನೀಡಲಾಗಿದೆ.

ನಟಿ ಅದಾ ಹಾಗೂ ನಿರ್ದೇಶಕ ಸುದೀಪ್ತೋ ಸೇನ್ ಗಂಭೀರ ಗಾಯಗೊಂಡಿದ್ದಾರೆ ಈ ಅಪಘಾತದ ಬಗ್ಗೆ ಹರಡುತ್ತಿರುವ ಸುದ್ದಿಗಳಿಂದ ಆತಂಕಕ್ಕೆ ಕಾರಣವಾಗಿದರಿಂದ್ದ,ಟ್ವೀಟರ್ ಮೂಲಕ ಕ್ಷೇಮವಾಗಿದ್ದಾರೆ ಎಂದು ತಿಳಿಸಿದ್ದಾರೆ.

“ನಾನು ಚೆನ್ನಾಗಿದ್ದೇನೆ ನಮ್ಮ ಅಪಘಾತದ ಬಗ್ಗೆ ಹರಡುತ್ತಿರುವ ಸುದ್ದಿಗಳಿಂದಾಗಿ ಬಹಳಷ್ಟು ಸಂದೇಶಗಳು ಬರುತ್ತಿವೆ. ಇಡೀ ತಂಡ, ನಾವೆಲ್ಲರೂ ಚೆನ್ನಾಗಿದ್ದೇವೆ, ಏನೂ ಗಂಭೀರವಾಗಿಲ್ಲ, ನಿಮ್ಮ ಕಾಳಜಿಗಾಗಿ ಧನ್ಯವಾದಗಳು” ಎಂದು ಟ್ವೀಟರ್ ಮೂಲಕ ಬರೆದುಕೊಂಡಿದ್ದಾರೆ.

You cannot copy content from Baravanige News

Scroll to Top