ಉಡುಪಿ: ಹೆಲ್ಮೆಟ್ ವಿಚಾರದಲ್ಲಿ ಗಲಾಟೆ; ದೂರು-ಪ್ರತಿದೂರು ದಾಖಲು

ಉಡುಪಿ ಮೇ 14: ನಗರದಲ್ಲಿ ಹೆಲ್ಮಟ್ ವಿಚಾರದಲ್ಲಿ ಹೊಟೇಲ್ ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಗ್ರಾಹಕರ ನಡುವೆ ನಡೆದಿರುವ ಗಲಾಟೆ ವಿಚಾರವಾಗಿ ಉಡುಪಿ ನಗರ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರು ದಾಖಲಾಗಿದೆ.

ಉಡುಪಿಯಲ್ಲಿ ಹೊಟೇಲ್ ವೊಂದರ ಎಂ.ಡಿ ಆಗಿರುವ ಮಣಿಪಾಲದ ಕೆ. ಬಾಲಕೃಷ್ಣ ಶೆಣೈ ಅವರು ನಿನ್ನೆ ತಮ್ಮ ಕಾರನ್ನು ಹೋಟೇಲ್‌ನಿಂದ ಚಾಲನೆ ಮಾಡಿಕೊಂಡು ಬರುತ್ತಿರುವಾಗ ಖಾಸಗಿ ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟರ್‌ನ್ನು ಪಕ್ಕಕ್ಕೆ ಇಡಲು ಪ್ರಯತ್ನಿಸುವಾಗ ಸ್ಕೂಟರ್ ಮೇಲಿದ್ದ ಹೆಲ್ಮಟ್ ಕೆಳಕ್ಕೆ ಬಿದ್ದಿರುವುದನ್ನು ಎತ್ತಿ ಪಕ್ಕಕ್ಕೆ ಇಟ್ಟಿದ್ದರು. ಆದರೆ ಆ ಬಳಿಕ ಹೋಟೆಲ್ ಬಳಿ ಬಂದ 5 ಜನ ಅಪರಿಚಿತರು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಿ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ. ಎಂದು ಕೆ. ಬಾಲಕೃಷ್ಣ ಶೆಣೈ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಮತ್ತೊಂದೆಡೆ ಮಲ್ಪೆಯ ಕೊಳ ನಿವಾಸಿ ಶ್ವೇತಾರಾಣಿ.ಡಿ ಅವರು ತಮ್ಮ ಗಂಡ ಮಕ್ಕಳೊಂದಿಗೆ ಉಡುಪಿಗೆ ಬಂದು ಅಂಗಡಿ ಬಳಿ ತಮ್ಮ ಸ್ಕೂಟರ್ ಪಾರ್ಕ್ ಮಾಡಿ, ಅದರಲ್ಲಿ ಹೆಲ್ಮಟ್ ಇಟ್ಟು ಸ್ವೀಟ್ಸ್ ತರಲು ಹೋಗಿದ್ದರು. ಈ ವೇಳೆ ಆಪಾದಿತ ಬಾಲಕೃಷ್ಣ ಶೆಣೈ ರವರು ಸ್ಕೂಟರ್ ಮೇಲಿದ್ದ ಹೆಲೈಟ್‌ನ್ನು ಬಿಸಾಡಿ ಹೋಗಿರುತ್ತಾನೆ. ಇದನ್ನು ಕೇಳಲು ಹೊಟೇಲ್‌ಗೆ ಹೋದಾಗ ಆಪಾದಿತ ಕೆ. ಬಾಲಕೃಷ್ಣ ಶೆಣೈ, ಶ್ವೇತಾ ರಾಣಿ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ್ದಾನೆ ಎಂಬುದಾಗಿ ಶ್ವೇತಾ ರಾಣಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಎರಡು ದೂರು ಪ್ರತಿದೂರು ದಾಖಲಾಗಿದೆ.

You cannot copy content from Baravanige News

Scroll to Top