ಪಡುಬಿದ್ರಿ ಠಾಣಾ ವ್ಯಾಪ್ತಿಯ ಬೆಳ್ಳಿಬೆಟ್ಟು ಎಂಬಲ್ಲಿ ಯುವಕನೋರ್ವ ಕಳೆದ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಮೃತ ಯುವಕ ಪ್ರಜನ್ ಬೆಳ್ಳಿಬೆಟ್ಟು(22), ನೇಣು ಹಾಕಿಕೊಂಡಿರುವುದು ಗಮನಕ್ಕೆ ಬರುತ್ತಿದಂತೆ, ತಕ್ಷಣ ಕೆಳಗಿಳಿಸಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯತ್ನ ವಿಫಲವಾಗಿದೆ.
ಈತ ಕಳೆದ ನಾಲ್ಕು ದಿನದ ಹಿಂದೆಯಷ್ಟೇ ನಂದಿಕೂರಿನ ಕೋಳಿಯಂಗಡಿಯೊಂದಕ್ಕೆ ಕೆಲಸಕ್ಕೆ ಸೇರಿಕೊಂಡಿದ್ದ ಎನ್ನಲಾಗಿದೆ.
ನಾಲ್ವರು ಮಕ್ಕಳಲ್ಲಿ ಈತ ಮೂರನೇಯವನಾಗಿದ್ದು,, ತಂದೆ ತಾಯಿಯೊಂದಿಗೆ ಬೆಳ್ಳಿಬೆಟ್ಟುವಿನ ಮನೆಯಲ್ಲಿ ವಾಸವಾಗಿದ್ದ.


