ಉಡುಪಿ: ರೈಲ್ವೆ ಬ್ರಿಡ್ಜ್ ಮೇಲೆ ಸಿಲುಕಿದ ಹಸು- ಅಗ್ನಿಶಾಮಕ ದಳದಿಂದ ರಕ್ಷಣೆ

ಉಡುಪಿ, ನ 19: ರೈಲ್ವೆ ಬ್ರಿಡ್ಜ್ ಮೇಲೆ ಸಿಲುಕಿದ ಹಸುವನ್ನು ರಕ್ಷಿಸಿದ ಘಟನೆ ಉಡುಪಿ ಜಿಲ್ಲೆಯ ಬೈಂದೂರು-ಬೀಜೂರು ಮಧ್ಯದಲ್ಲಿ ಸಿಗುವ ರೈಲ್ವೆ ಸೇತುವೆಯಲ್ಲಿ ನಡೆದಿದೆ.

ಹುಲ್ಲು ಮೇಯುತ್ತಾ ಬಂದ ಹಸುವೊಂದು ರೈಲ್ವೆ ಬ್ರಿಜ್ ಮೇಲೆ ಸಿಲುಕಿ ಹಾಕಿಕೊಂಡಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ .

ಸ್ಥಳೀಯ ಸಮಾಜ ಸೇವಕ ಸುಬ್ರಹ್ಮಣ್ಯ ಬೀಜೂರು ನೇತೃತ್ವದಲ್ಲಿ ಹಸುವಿನ ರಕ್ಷಣೆಗೆ ಪ್ರಯತ್ನಿಸಲಾಯಿತು. ಬಳಿಕ ಬೈಂದೂರು ಅಗ್ನಿಶಾಮಕ ದಳಕ್ಕೆ ಮಾಹಿತಿಯನ್ನು ನೀಡಲಾಯಿತು. ಅರ್ಧ ಗಂಟೆಗಳ ಹರಸಾಹಸದ ಬಳಿಕ ಅಗ್ನಿಶಾಮಕ ಸಿಬ್ಬಂದಿ ಹಸುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

Scroll to Top