ಉಡುಪಿ: ರೈಲ್ವೆ ಬ್ರಿಡ್ಜ್ ಮೇಲೆ ಸಿಲುಕಿದ ಹಸು- ಅಗ್ನಿಶಾಮಕ ದಳದಿಂದ ರಕ್ಷಣೆ

ಉಡುಪಿ, ನ 19: ರೈಲ್ವೆ ಬ್ರಿಡ್ಜ್ ಮೇಲೆ ಸಿಲುಕಿದ ಹಸುವನ್ನು ರಕ್ಷಿಸಿದ ಘಟನೆ ಉಡುಪಿ ಜಿಲ್ಲೆಯ ಬೈಂದೂರು-ಬೀಜೂರು ಮಧ್ಯದಲ್ಲಿ ಸಿಗುವ ರೈಲ್ವೆ ಸೇತುವೆಯಲ್ಲಿ ನಡೆದಿದೆ.

ಹುಲ್ಲು ಮೇಯುತ್ತಾ ಬಂದ ಹಸುವೊಂದು ರೈಲ್ವೆ ಬ್ರಿಜ್ ಮೇಲೆ ಸಿಲುಕಿ ಹಾಕಿಕೊಂಡಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ .

ಸ್ಥಳೀಯ ಸಮಾಜ ಸೇವಕ ಸುಬ್ರಹ್ಮಣ್ಯ ಬೀಜೂರು ನೇತೃತ್ವದಲ್ಲಿ ಹಸುವಿನ ರಕ್ಷಣೆಗೆ ಪ್ರಯತ್ನಿಸಲಾಯಿತು. ಬಳಿಕ ಬೈಂದೂರು ಅಗ್ನಿಶಾಮಕ ದಳಕ್ಕೆ ಮಾಹಿತಿಯನ್ನು ನೀಡಲಾಯಿತು. ಅರ್ಧ ಗಂಟೆಗಳ ಹರಸಾಹಸದ ಬಳಿಕ ಅಗ್ನಿಶಾಮಕ ಸಿಬ್ಬಂದಿ ಹಸುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

You cannot copy content from Baravanige News

Scroll to Top