ಹೆಬ್ರಿ: ದೀಪ ಇಡಲು ಹೋದ ಯುವಕ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತ್ಯು

ಹೆಬ್ರಿ, ನ 14: ದೀಪಾವಳಿ ಹಬ್ಬದ ಪ್ರಯುಕ್ತ ಗದ್ದೆ ಹಾಗೂ ಬಾವಿಗೆ ದೀಪ ಇಡಲು ಹೋದಾಗ ಯುವಕನೋರ್ವ ಮೃತಪಟ್ಟ ಘಟನೆ ವರದಿಯಾಗಿದೆ.

ಆವರಣವಿಲ್ಲದ ಬಾವಿ ಬಳಿ ದೀಪ ಇಡುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯ ನೀರಿಗೆ ಬಿದ್ದು ಹೆಬ್ರಿ ತಾಲೂಕು ಚಾರ ಗ್ರಾಮದ ಚಾರ ಬಸದಿ ಬಳಿ ನಿವಾಸಿ ಸಚಿನ್‌ (35) ಮೃತಪಟ್ಟಿದ್ದಾನೆ.

ನ. 12ರಂದು ಸಂಜೆ ದೀಪಾವಳಿ ಸಂದರ್ಭ ಮನೆಯ ಹತ್ತಿರದ ಬಾವಿ ಬಳಿ ಘಟನೆ ನಡೆದಿದ್ದು, ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top