ಪುತ್ತೂರು: ಪುತ್ತಿಲ ಪರಿವಾರ ಕಚೇರಿಗೆ ನುಗ್ಗಿದ ಯುವಕರ ತಂಡ: ಠಾಣೆಗೆ ಆಗಮಿಸಿದ ಅರುಣ್ ಕುಮಾರ್ ಪುತ್ತಿಲ ಹಾಗೂ ಬಿಜೆಪಿ ಮುಖಂಡರು

ಪುತ್ತೂರು, ನ.10: ತಲವಾರು ಹಿಡಿದುಕೊಂಡ ಯುವಕರ ತಂಡವೊಂದು ಪುತ್ತಿಲ ಪರಿವಾರದ ಕಚೇರಿಗೆ ನುಗ್ಗಿದ ಬಗ್ಗೆ ವರದಿಯಾಗಿದೆ.

ಮುಕ್ರಂಪಾಡಿಯ ಸುಭದ್ರ ಕಲ್ಯಾಣ ಮಂಟಪದ ಬಳಿ ಇರುವ ಅರುಣ್ ಕುಮಾರ್ ಪುತ್ತಿಲ ರವರ ಕಚೇರಿಗೆ ಇಂದು ಮಧ್ಯಾಹ್ನ ವೇಳೆ ಯುವಕರ ತಂಡವೊಂದು ನುಗ್ಗಿದ್ದು, ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಹಿನ್ನೆಲೆ ಪುತ್ತೂರು ನಗರ ಠಾಣೆಗೆ ಅರುಣ್ ಕುಮಾರ್ ಪುತ್ತಿಲ ಹಾಗೂ ಬಿಜೆಪಿ ಮುಖಂಡರು ಭೇಟಿ ನೀಡಿದ್ದಾರೆ.

ಘಟನೆ ಬಗ್ಗೆ ತಿಳಿಯುತ್ತದ್ದಂತೆ ಹಲವರು ಠಾಣೆ ಮುಂದೆ ಜಮಾಯಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ..



You cannot copy content from Baravanige News

Scroll to Top