Monday, December 4, 2023
Homeಸುದ್ದಿಕರಾವಳಿಅಂಬೇಡ್ಕರ್‌ ಭವನದಲ್ಲಿ ಮದ್ಯಪಾನ ಪಾರ್ಟಿ ಮಾಡಿದ ಕುರಿತು ಪ್ರಕರಣ ದಾಖಲು

ಅಂಬೇಡ್ಕರ್‌ ಭವನದಲ್ಲಿ ಮದ್ಯಪಾನ ಪಾರ್ಟಿ ಮಾಡಿದ ಕುರಿತು ಪ್ರಕರಣ ದಾಖಲು

ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ವಾರಂಬಳ್ಳಿ ಗ್ರಾಮದ ತೆಂಕುಬಿರ್ತಿಯ ಅಂಬೇಡ್ಕರ್‌ ಭವನದಲ್ಲಿ ಮದ್ಯಪಾನ ಪಾರ್ಟಿ ಮಾಡಿದ ಕುರಿತು ಪ್ರಕರಣ ದಾಖಲಾಗಿದೆ.

ಶ್ಯಾಮರಾಜ್‌ ಬಿರ್ತಿ, ಸುರೇಶ್‌, ಶಿವ, ಪ್ರಶಾಂತ್‌ ಅವರು ಸ್ನೇಹಿತರೊಂದಿಗೆ ಸೇರಿ ಪಂಚಾಯತ್‌ ಅಥವಾ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯದೇ ಅಂಬೇಡ್ಕರ್‌ ಭವನಕ್ಕೆ ಅತಿಕ್ರಮ ಪ್ರವೇಶ ಮಾಡಿ ಭವನವನ್ನು ದುರುಪಯೋಗ ಪಡಿಸಿಕೊಂಡು ಕಾನೂನು ಬಾಹಿರವಾಗಿ ಮದ್ಯಪಾನ ಮಾಡಿರುವುದಾಗಿ ಸವಿತಾ ವಾರಂಬಳ್ಳಿ ಆರೋಪಿಸಿದ್ದಾರೆ.

ಘಟನೆಯ ವೀಡಿಯೋ ಮಾಡಲು ಹೋದಾಗ ಆರೋಪಿಗಳು ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ಸವಿತಾ ಅವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News