Saturday, July 27, 2024
Homeಸುದ್ದಿಉಡುಪಿ: ಕಂಟೈನರ್ ಲಾರಿ ಢಿಕ್ಕಿ- ಪಾದಾಚಾರಿ ಮೃತ್ಯು

ಉಡುಪಿ: ಕಂಟೈನರ್ ಲಾರಿ ಢಿಕ್ಕಿ- ಪಾದಾಚಾರಿ ಮೃತ್ಯು

ಉಡುಪಿ,ನ.02: ಕಂಟೈನರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ಸಂತೆಕಟ್ಟೆಯಲ್ಲಿ ನಡೆದಿದೆ.

ಮೃತರನ್ನು ಸಂಜೀವ (61) ಎಂದು ಗುರುತಿಸಲಾಗಿದೆ.ಪುತ್ತೂರು ಗ್ರಾಮದ ಸಂತೆಕಟ್ಟೆ ಕ್ಲಾಸಿಕ್ ಸರ್ವಿಸ್ ಸೆಂಟರ್ ಬಳಿ ಹಾದು ಹೋಗುವ ಕರಾವಳಿ- ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ-66 ರ ಪಕ್ಕದ ಕೆಸರಿನ ರಸ್ತೆಯಲ್ಲಿ ಸಂಜೀವ ಅವರು ನ.1ರ ಬುಧವಾರ ಬೆಳಗ್ಗೆ 6:50ಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಉಡುಪಿ ಕಡೆಯಿಂದ ಸಂತೆಕಟ್ಟೆ ಕಡೆಗೆ ಹೋಗುತ್ತಿದ್ದ ಕೆಎ-19-ಎಎ-6363 ನೇ ನೋಂದಣಿಯ ಕಂಟೈನರ್ ವಾಹನವು ರಸ್ತೆಯ ಎಡಭಾಗದಲ್ಲಿ ಬಂದ ಚಾಲಕ ಪ್ರಮೋದ್ ರವರ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಪಲ್ಟಿಯಾಗಿದೆ. ಇದರಿಂದ ಲಾರಿಯ ಕಂಟೈನರ್ ಬಾಕ್ಸ್ ವಾಹನದಿಂದ ಬೇರ್ಪಟ್ಟು ಲಾರಿ ನಿಯಂತ್ರಣ ತಪ್ಪಿ ಸಂಜೀವನಿಗೆ ಡಿಕ್ಕಿ ಹೊಡೆದಿದೆ.

ದುರಂತವೆಂದರೆ ಚಿಕಿತ್ಸೆ ಫಲಕಾರಿಯಾಗದೆ ಬೆಳಗ್ಗೆ 10:16ಕ್ಕೆ ಅವರು ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಉಡುಪಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News