Saturday, July 27, 2024
Homeಸುದ್ದಿಕರಾವಳಿಬಜ್ಪೆ : ಮಗನಿಂದಲೇ ತಾಯಿಯ ಕೊಲೆ ; ಅತ್ಯಾಚಾರ..!!!

ಬಜ್ಪೆ : ಮಗನಿಂದಲೇ ತಾಯಿಯ ಕೊಲೆ ; ಅತ್ಯಾಚಾರ..!!!

ಬಜಪೆ : ಕಟೀಲು ಸಮೀಪದ ಕೊಂಡೇಲ ಗ್ರಾಮದ ದುರ್ಗಾನಗರದಲ್ಲಿನ ಮಹಿಳೆ ರತ್ನಾ ಶೆಟ್ಟಿ (56) ಅವರ ಬಾಯಿಗೆ ಟೊಮೊಟೋ ಹಾಕಿ ಉಸಿರುಗಟ್ಟಿಸಿ ಕೊಲೆಗೈದು ಬಳಿಕ ಅತ್ಯಾಚಾರ ಮಾಡಿದ ಅವರ ಮಗ ರವಿರಾಜ್‌ ಶೆಟ್ಟಿ (33)ಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ತಾಯಿಯನ್ನು ಮಗ ಕೊಲೆಗೈದು ಅತ್ಯಾಚಾರ ಮಾಡಿರುವ ವಿಲಕ್ಷಣ ಘಟನೆ ಇದಾಗಿದೆ.

ಅ. 26ರಂದು ರಾತ್ರಿ ತಾಯಿ ರತ್ನಾ ಅವರ ಮೇಲೆ ಕೈ ಹಾಕಿದ್ದು, ಇದರಿಂದ ಅವರು ಭಯಪಟ್ಟು ಕುಳಿತುಕೊಂಡಿದ್ದ ವೇಳೆ ಅವರ ಬಾಯಿ ಹಾಗೂ ಮೂಗನ್ನು ಸೇರಿಸಿ ಬಿಗಿದಿಟ್ಟುಕೊಂಡು ಟೊಮೊಟೊ ಹಣ್ಣು ಬಾಯಿಗೆ ಹಾಕಿದ್ದು ಅವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಬಳಿಕ ಅತ್ಯಾಚಾರವನ್ನು ಕೂಡ ಮಾಡಿದ್ದಾನೆ. ಶವವನ್ನು ಹಗ್ಗದಿಂದ ಕಟ್ಟಿದ್ದ. ಅದನ್ನು ಬೇರೆಡೆಗೆ ಸಾಗಿಸುವ ಬಗ್ಗೆ ಯೋಚನೆ ಮಾಡಿದ್ದ. ಆದರೆ ಅದಕ್ಕೆ ಸಮಯ ಸಿಗಲಿಲ್ಲ. ಬಳಿಕ ಕಿನ್ನಿಗೋಳಿಯಲ್ಲಿನ ಲಾಡ್ಜ್ವೊಂದರಲ್ಲಿ ಅ. 27 ಮತ್ತು 28ರಂದು ರಾತ್ರಿ ಉಳಿದುಕೊಂಡಿದ್ದ ಎನ್ನಲಾಗಿದೆ.

ಶನಿವಾರ ಪಕ್ಕದ ಮನೆಯವರಿಗೆ ತಾಯಿಗೆ ಹುಷಾರಿಲ್ಲ ಅವರನ್ನು ಸಂಬಂಧಿಕರ ಮನೆಗೆ ಬಿಟ್ಟು ಬಂದಿದ್ದಾನೆ ಎಂದು ಸುಳ್ಳು ಹೇಳಿದ್ದ. ರೂಮಿನಲ್ಲಿ ತಾಯಿ-ಮಗ ಇಬ್ಬರೇ ಇದ್ದರು. ಪಕ್ಕದ ಮನೆಯವರಿಗೆ ದುರ್ವಾಸನೆ ಬಂದ ಕಾರಣ ಘಟನೆ ಬೆಳಕಿಗೆ ಬಂದಿದೆ.

ರವಿರಾಜ್‌ ಮದ್ಯ ಕುಡಿದಿದ್ದ. ಗಾಂಜಾದ ಸೇವನೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಆದರೂ ಪರೀಕ್ಷೆ ಮಾಡಬೇಕಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬಜಪೆ ಪೊಲೀಸರು ಅ.30 ರಂದು ಸಂಜೆ ರವಿರಾಜ್‌ ಶೆಟ್ಟಿಯನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News