Monday, May 20, 2024
Homeಸುದ್ದಿಕರಾವಳಿಶಿರ್ವ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಬಡ ಮಹಿಳೆಗೆ ಮನೆ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ

ಶಿರ್ವ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಬಡ ಮಹಿಳೆಗೆ ಮನೆ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ

ಶಿರ್ವ ಗ್ರಾಮ, ಮುಟ್ಲಪಾಡಿ ವಾರ್ಡ್ ನಿವಾಸಿ, ಬಡ ವಿಧವೆ ಮಹಿಳೆ ಗುಲಾಬಿ ಪೂಜಾರ್ತಿಯವರಿಗೆ ಶಿರ್ವ ಗ್ರಾಮೀಣ ಕಾಂಗ್ರೆಸ್ ನೇತೃತ್ವದಲ್ಲಿ ಶಿರ್ವ ಗ್ರಾಮ ಪಂಚಾಯತ್ ಹಾಗೂ ಇತರ ದಾನಿಗಳ ಸಹಕಾರದೊಂದಿಗೆ ಹೊಸ ಮನೆ ನಿರ್ಮಾಣ ಕಾರ್ಯಕ್ಕೆ ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸವಿತ ಪೂಜಾರ್ತಿಯವರು ಶಿಲಾನ್ಯಾಸ ನೆರವೇರಿಸಿದರು.

ಶಿರ್ವ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮೆಲ್ವಿನ್ ಡಿಸೋಜರವರು ಸ್ವಾಗತಿಸಿ ಮನೆ ನಿರ್ಮಾಣ ಕೆಲಸಕ್ಕೆ ಎಲ್ಲರ ಸಹಕಾರ ಕೋರಿ, ಸುಮಾರು ನಾಲ್ಕು ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು. ಅರ್ಚಕರಾದ ಶ್ರೀ ಗುಂಡು ಭಟ್‌ರವರು ಶಿಲಾನ್ಯಾಸದ ವಿಧಿ ವಿಧಾನ ನೆರವೇರಿಸಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಶ್ರೀ ಇಗ್ನೇಷಿಯಸ್ ಡಿಸೋಜ, ಪಂಚಾಯತ್ ಉಪಾಧ್ಯಕ್ಷರಾದ ವಿಲ್ಸನ್ ರೋಡ್ರಿಗಸ್, ಮಾಜಿ ಅಧ್ಯಕ್ಷರಾದ ಕೆ.ಆರ್. ಪಾಟ್ಕರ್, ರತನ್ ಶೆಟ್ಟಿ, ಹಸನಬ್ಬ ಶೇಖ್, ಮಾಜಿ ಉಪಾಧ್ಯಕ್ಷರಾದ ಗ್ರೇಸಿ ಕಾರ್ಡೋಜಾ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಗಳಾದ ಜುಬೇರ್ ಅಹಮ್ಮದ್ ಅಲಿ, ಸ್ಥಳೀಯ ಪಂಚಾಯತ್ ಸದಸ್ಯರಾದ ಸುಜಾತ ಪೂಜಾರ್ತಿ, ಗೀತಾ ನಾಯ್ಕ್, ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಹಾಸ, ರವೀಂದ್ರ ಆಚಾರ್ಯ, ಅಬ್ದುಲ್ ಲತೀಫ್, ಮಾಜಿ ಪಂಚಾಯತ್ ಸದಸ್ಯರಾದ ರಮೇಶ್ ಬಂಗೇರ, ಮೆಗೇಶ್ ಪೂಜಾರಿ, ಮಜೂರು ಪಂಚಾಯತ್ ಸದಸ್ಯರಾದ ವಿಜಯ್ ಧೀರಜ್, ಜೈನುದ್ದಿನ್, ಟೋನಿ, ವಿಠಲ್ ಪೂಜಾರಿ, ವಿಶ್ವನಾಥ ಪೂಜಾರಿ, ಸಂಜೀವಿ ಪೂಜಾರ್ತಿ, ಸಂತೋಷ್ ತೋಟ, ಗಿಲ್ಬರ್ಟ್ ಕೋರ್ಡ, ರವೀಂದ್ರ ಪೂಜಾರಿ, ಪ್ರಕಾಶ್ ಪೂಜಾರಿ ಗುಲಾಬಿ ಪೂಜಾರ್ತಿ ಹಾಜರಿದ್ದರು. ಮನೆ ನಿರ್ಮಾಣದ ಗುತ್ತಿಗೆದಾರರಾದ ಪೀಟರ್ ಕೋರ್ಡಾರವರು ಸಹಕಾರ ನೀಡಿದರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News