ಉಡುಪಿ : ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ರಜತ ಮಹೋತ್ಸವ ಸುಸಂದರ್ಭದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಪ್ರಾಯೋಜಕತ್ವದಲ್ಲಿ ನಿರ್ಮಿಸಿರುವ ಉಡುಪಿ ಪತ್ರಿಕಾ ಭವನದ ನೂತನ ಪಾರ್ಕಿಂಗ್ ಮತ್ತು ರೂಫಿಂಗ್ ವ್ಯವಸ್ಥೆಯ ಉದ್ಘಾಟನೆ ಕಾರ್ಯಕ್ರಮ ಇಂದು ನಡೆಯಿತು.
![](https://i0.wp.com/www.baravanige.com/wp-content/uploads/2023/10/IMG-20231012-WA0010-optimized.jpg?resize=696%2C485&ssl=1)
![](https://i0.wp.com/www.baravanige.com/wp-content/uploads/2023/10/IMG-20231012-WA0014-optimized.jpg?resize=696%2C464&ssl=1)
ನೂತನ ಪಾರ್ಕಿಂಗ್ ಮತ್ತು ರೂಫಿಂಗ್ ವ್ಯವಸ್ಥೆಯನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಿದರು. ಬಳಿಕ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
![](https://i0.wp.com/www.baravanige.com/wp-content/uploads/2023/10/IMG-20231012-WA0012-optimized.jpg?resize=696%2C492&ssl=1)
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಿದ್ದರು.
ಇದೇ ಸಂದರ್ಭದಲ್ಲಿ ಪತ್ರಿಕಾ ಭವನಕ್ಕೆ ಪರಿಕರ ಕೊಡುಗೆ ನೀಡಿದ ಸಾಲಿಡಾರಿಟಿ ಯೂತ್ ಮೂವ್ಮೆಂಟ್ನ ಜಿಲ್ಲಾಧ್ಯಕ್ಷ ನಬೀಲ್ ಗುಜ್ಜರಬೆಟ್ಟು ಅವರಿಗೆ ಗೌರವ ಸಲ್ಲಿಸಲಾಯಿತು. ವೇದಿಕೆಯಲ್ಲಿ ಸಂಘದ ರಜತ ಮಹೋತ್ಸವ ಸಮಿತಿಯ ಸಂಚಾಲಕ ಮುಹಮ್ಮದ್ ಶರೀಫ್, ಪತ್ರಿಕಾ ಭವನದ ಸಂಚಾಲಕ ಅಜಿತ್ ಅರಾಡಿ ಉಪಸ್ಥಿತರಿದ್ದರು.
![](https://i0.wp.com/www.baravanige.com/wp-content/uploads/2023/10/IMG-20231012-WA0013-optimized.jpg?resize=696%2C464&ssl=1)
ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಪತ್ರಕರ್ತ ಪ್ರಕಾಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
![](https://i0.wp.com/www.baravanige.com/wp-content/uploads/2023/10/IMG-20231012-WA0015-1-optimized.jpg?resize=696%2C421&ssl=1)
![](https://i0.wp.com/www.baravanige.com/wp-content/uploads/2023/10/IMG-20231012-WA0011-optimized.jpg?resize=696%2C464&ssl=1)
![](https://i0.wp.com/www.baravanige.com/wp-content/uploads/2023/10/IMG-20231012-WA0009-optimized.jpg?resize=696%2C406&ssl=1)