ಉಡುಪಿ : ಜಿಲ್ಲೆ ಬೈಂದೂರು ತಾಲೂಕಿನ ಬೆಳ್ಳಾಲ ಗ್ರಾಮದಲ್ಲಿ ವಿಶ್ವಹಿಂದೂ ಪರಿಷದ್ ಭಜರಂಗದಳ ಪ್ರತಿಭಟನೆ ಮಾಡಿದೆ.
![](https://i0.wp.com/www.baravanige.com/wp-content/uploads/2023/10/IMG-20231007-WA0015-optimized.jpg?resize=696%2C366&ssl=1)
ನಾಡಕೋವಿಯಿಂದ ಗುಂಡು ಹಾರಿಸಿ ಮೂರು ಗೋವುಗಳನ್ನು ಕೊಂದ ನರಸಿಂಹ ಕುಲಾಲ್ ನನ್ನು ಶೀಘ್ರವೇ ಬಂಧಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಸಂತ್ರಸ್ತ ಕುಟುಂಬಕ್ಕೆ ಸೂಕ್ತ ರೀತಿಯ ಭದ್ರತೆ ರಕ್ಷಣೆಯನ್ನು ನೀಡಬೇಕಾಗಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಒತ್ತಾಯಿಸಿದೆ.
ಕೊಲ್ಲೂರು ಠಾಣೆಗೆ ತೆರಳಿ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿದರು. ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿಯಾದ ಶರಣ್ ಪಂಪ್ ವೆಲ್ ಸಂತ್ರಸ್ತ ಕುಟುಂಬದ ಮನೆಗೆ ತೆರಳಿ ಧೈರ್ಯ ತುಂಬಿದ್ದಾರೆ.