Saturday, July 27, 2024
Homeಸುದ್ದಿಉಡುಪಿ: ಲಾರಿ ಟೆಂಪೋ ಮಾಲಕರು ಬಂದ್ ಕರೆ ವಾಪಸ್‌ ಪಡೆಯಲು ಕೋಟ ಮನವಿ

ಉಡುಪಿ: ಲಾರಿ ಟೆಂಪೋ ಮಾಲಕರು ಬಂದ್ ಕರೆ ವಾಪಸ್‌ ಪಡೆಯಲು ಕೋಟ ಮನವಿ

ಉಡುಪಿ, ಅ 02: ಸಿಎಂ ಸಿದ್ದರಾಮಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವರ ಸಭೆ ಕರೆಯುವ ಆಶ್ವಾಸನೆ ನೀಡಿರುವುದರಿಂದ ಮತ್ತು ಶಾಲಾ ಮಕ್ಕಳ ಪರೀಕ್ಷೆ ನಡೆಯುತ್ತಿರುವುದರಿಂದ ಜಿಲ್ಲಾ ಬಂದ್‌ ಕರೆಯನ್ನು ಲಾರಿ ಟೆಂಪೋ ಮಾಲಕರು ವಾಪಸ್‌ ಪಡೆಯಬೇಕು ಎಂದು ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಪ್ರತಿಭಟನ ಕಾರರಿಗೆ ಮನವಿ ಮಾಡಿದ್ದಾರೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಸಿಎಂ ಅವರೊಂದಿಗೆ ಚರ್ಚಿಸಿ ಅ. 5ರಂದು ಸಭೆ ಕರೆಯುವುದಾಗಿ ತಿಳಿಸಿದ್ದಾರೆ. ಸರಕಾರದ ಜತೆ ಚರ್ಚಿಸಿ ಹೋರಾಟಗಾರರಿಗೆ ನ್ಯಾಯ ದೊರಕಿಸುವ ಪ್ರಯತ್ನ ಮಾಡಲಿದ್ದೇವೆ. ಭಾನುವಾರ ಮುಖ್ಯಮಂತ್ರಿಗಳನ್ನು ಖುದ್ದು ಭೇಟಿಯಾಗಿದ್ದು, ಅವರ ಸಮಕ್ಷಮ ಸಭೆ ಕರೆಯಲು ಕೋರಿದಾಗ ಶೀಘ್ರದಲ್ಲಿ ಜಿಲ್ಲಾ ಶಾಸಕರು ಮತ್ತು ಅಧಿಕಾರಿಗಳ ಸಭೆ ನಡೆಸುವುದಾಗಿ ತಿಳಿಸಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News