Saturday, July 27, 2024
Homeಸುದ್ದಿರಾಜ್ಯಚೈತ್ರಾ ಕುಂದಾಪುರ ಕೇಸ್ ; ಅಭಿನವ ಹಾಲಶ್ರೀ ಸಿಸಿಬಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ

ಚೈತ್ರಾ ಕುಂದಾಪುರ ಕೇಸ್ ; ಅಭಿನವ ಹಾಲಶ್ರೀ ಸಿಸಿಬಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ

ಬೆಂಗಳೂರು : ಚೈತ್ರಾ ಕುಂದಾಪುರ ವಿರುದ್ಧದ ವಂಚನೆ ಆರೋಪ ಕೇಸ್ನಲ್ಲಿ ಹಿರೇಹಡಗಲಿ ಗ್ರಾಮದ ಸದ್ಗುರು ಶಿವಯೋಗಿ ಹಾಲಶ್ರೀ ಮಠದ ಅಭಿನವ ಹಾಲವೀರಪ್ಪಜ್ಜ ಸ್ವಾಮೀಜಿಯ ಬಂಧನ ಆಗಿದೆ.

ಮೊನ್ನೆ ರಾತ್ರಿ ಒಡಿಶಾದಲ್ಲಿ ಬಂಧಿಸಿರುವ ಶ್ರೀಗಳನ್ನು ಇವತ್ತು ಬೆಂಗಳೂರಿನ ಕೋರ್ಟ್ಗೆ ಹಾಜರುಪಡಿಸಿ ಸಿಸಿಬಿ ತನ್ನ ಕಸ್ಟಡಿಗೆ ಕೇಳಿತ್ತು. ವಿಚಾರಣೆ ನಡೆಸಿರುವ 19ನೇ ಎಸಿಎಂಎಂ ಕೋರ್ಟ್, ಶ್ರೀಗಳನ್ನು 10 ದಿನಗಳವರೆಗೆ ಸಿಸಿಬಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.

ಸಿಸಿಬಿ ಅಧಿಕಾರಿಗಳು ಶ್ರೀಗಳನ್ನು 14 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು. ಆದರೆ ಕೋರ್ಟ್ ಸೆಪ್ಟೆಂಬರ್ 29ರವರೆಗೆ ಸಿಸಿಬಿ ಕಸ್ಟಡಿಗೆ ನೀಡಿ ಆದೇಶ ಮಾಡಿದೆ. ಮಾತ್ರವಲ್ಲ ಶ್ರೀಗಳು ಸಲ್ಲಿಸಿರುವ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಕೆ ಮಾಡಲು ಸರ್ಕಾರಿ ಪರ ವಕೀಲರಿಗೆ ಕಾಲಾವಕಾಶ ನೀಡಿದೆ.

ಸೆಪ್ಟೆಂಬರ್ 29 ರಂದು ಆಕ್ಷೇಪಣೆ ಸಲ್ಲಿಕೆ ಮಾಡುವಂತೆ ಸೂಚನೆ ನೀಡಿದೆ. ಕೋರ್ಟ್ ಆದೇಶ ಬೆನ್ನಲ್ಲೇ ಹಾಲಶ್ರೀಗಳನ್ನು ಕಚೇರಿಗೆ ಕರೆದುಕೊಂಡು ಬಂದಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News