Thursday, May 16, 2024
Homeಸುದ್ದಿಕರಾವಳಿಮತ್ತೆ ಅಷ್ಟಮಿಯ ಮೆರಗು ಹೆಚ್ಚಲಿಸಲಿರುವ ಶಿರೂರು ಮಠ : ಕಲಾವಿದರಿಗಾಗಿಯೇ ತಾಯಾರಾಗಿದೆ ನಾಲ್ಕು ಲಕ್ಷ...

ಮತ್ತೆ ಅಷ್ಟಮಿಯ ಮೆರಗು ಹೆಚ್ಚಲಿಸಲಿರುವ ಶಿರೂರು ಮಠ : ಕಲಾವಿದರಿಗಾಗಿಯೇ ತಾಯಾರಾಗಿದೆ ನಾಲ್ಕು ಲಕ್ಷ ರೂಪಾಯಿಯ ನೋಟಿನ‌ ಮಾಲೆಗಳು

ಉಡುಪಿ : ಈ ಬಾರಿಯ ಕೃಷ್ಣಜನ್ಮಾಷ್ಟಮಿಯ ವಿಟ್ಲಪಿಂಡಿ ಮಹೋತ್ಸವದಂದು ಶಿರೂರು ಮಠದ ವತಿಯಿಂದ ಸುಮಾರು 4 ಲಕ್ಷ ರೂ. ನೋಟಿನ ಮಾಲೆಗಳನ್ನು ವಿವಿಧ ಕಲಾ ತಂಡಗಳಿಗೆ ನೀಡಿ ಗೌರವಿಸಲಾಗುವುದು ಎಂದು ಶಿರೂರು ಮಠಾಧೀಶ ಶ್ರೀ ವೇದವರ್ಧನತೀರ್ಥರು ತಿಳಿಸಿದ್ದಾರೆ.



ಉಡುಪಿಯ ರಥಬೀದಿಯಲ್ಲಿರುವ ಶಿರೂರು ಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನು ವಿವರಿಸಿದರು. ಕೀರ್ತಿಶೇಷ ಶ್ರೀ ಲಕ್ಷ್ಮೀವರತೀರ್ಥರು ಈ ಹಿಂದೆ ವಿಜೃಂಭಣೆಯಿಂದ ಕೃಷ್ಣಜನ್ಮಾಷ್ಟಮಿಯನ್ನು ಆಚರಿಸುತ್ತಿದ್ದರು. ಅವರಂತೆಯೇ ಸಂಭ್ರಮ, ಸಡಗರದಿಂದ ಅಷ್ಟಮಿಯನ್ನು ಆಚರಿಸಲಾಗುತ್ತದೆ ಎಂದರು.



ಸೆ.7 ರಂದು ಸಂಜೆ 4 ರಿಂದ 8 ಗಂಟೆಯವರೆಗೆ ರಥಬೀದಿಯ ತೆಂಕು ಸುತ್ತಿನಲ್ಲಿ ಹಾಕಿರುವ ರಥದ ಗುತ್ತಿನ ಅನ್ನ ವಿಠಲ ವೇದಿಕೆಯಲ್ಲಿ ನಡೆಯಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಶಿರೂರು ಮಠದ ಕಚೇರಿಯನ್ನು ಸಂಪರ್ಕಿಸಬಹುದು ಎಂದರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News