Saturday, May 4, 2024
Homeಸುದ್ದಿಕರಾವಳಿಸೂರ್ಯಯಾನ ಯಶಸ್ಸಿಗೆ ಆದಿತ್ಯ ಹೃದಯ ಸ್ತೋತ್ರ ಪಠಿಸಿ: ಪೇಜಾವರ ಶ್ರೀ ಕರೆ

ಸೂರ್ಯಯಾನ ಯಶಸ್ಸಿಗೆ ಆದಿತ್ಯ ಹೃದಯ ಸ್ತೋತ್ರ ಪಠಿಸಿ: ಪೇಜಾವರ ಶ್ರೀ ಕರೆ

ಮೈಸೂರು : ಸೂರ್ಯಯಾನ ಯಶಸ್ಸಿಗಾಗಿ ಆದಿತ್ಯ ಹೃದಯ ಸ್ತೋತ್ರ ಪಠಿಸಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ ನೀಡಿದ್ದಾರೆ.

ಈಗಾಗಲೇ ನಮ್ಮ ಇಸ್ರೋ ಸಂಸ್ಥೆ ಚಂದ್ರಯಾನ-3 ತಲುಪುವಲ್ಲಿ ಯಶಸ್ವಿಯಾಗಿದೆ. ಅದೇ ರೀತಿ ಇಸ್ರೋ ಸೂರ್ಯನೆಡೆಗೆ ತಮ್ಮ ಪ್ರಥಮ ಯಾನವನ್ನು ನಡೆಸುತ್ತಿದೆ. ಚಂದ್ರಯಾನದಂತೆ ಇದೂ ಯಶಸ್ವಿಯಾಗಲಿ ಎಂದು ಹೇಳಿದ್ದಾರೆ.

ಆ ನಿಮಿತ್ತ ಶುಕ್ರವಾರದಂದು ಎಲ್ಲರೂ ಅಗಸ್ತಮುನಿ ವಿರಚಿತ ಆದಿತ್ಯ ಹೃದಯ ಸ್ತೋತ್ರ ಪಠಿಸಿ ಪ್ರಾರ್ಥಿಸಿ ಎಂದು ಮೈಸೂರಿನಲ್ಲಿ ಶ್ರೀ ಪೇಜಾವರ ಶ್ರೀಗಳು ಜನರಿಗೆ ಕರೆ ನೀಡಿದ್ದಾರೆ.

ಯಶಸ್ವಿ ಚಂದ್ರಯಾನದ ಬಳಿಕ ಸೂರ್ಯನ ಅಧ್ಯಯನಕ್ಕೆ ಇಸ್ರೋ ಮುಂದಾಗಿದ್ದು, ಸೆಪ್ಟೆಂಬರ್ 2 ರಂದು ಬೆಳಗ್ಗೆ11:50 ಕ್ಕೆ ಆದಿತ್ಯ L1 ಅನ್ನು ಉಡಾವಣೆ ಮಾಡಲು ನಿರ್ಧರಿಸಿದೆ. ಈ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಮಾಹಿತಿ ಹಂಚಿಕೊಂಡಿದ್ದು, ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ ರಾಕೆಟ್ ಉಡಾವಣೆಯಾಗಲಿದೆ ಎಂದು ಹೇಳಿದೆ.

ಆ ನಿಮಿತ್ತ ಶುಕ್ರವಾರದಂದು ಎಲ್ಲರೂ ಅಗಸ್ತಮುನಿ ವಿರಚಿತ ಆದಿತ್ಯ ಹೃದಯ ಸ್ತೋತ್ರ ಪಠಿಸಿ ಪ್ರಾರ್ಥಿಸಿ ಎಂದು ಮೈಸೂರಿನಲ್ಲಿ ಶ್ರೀ ಪೇಜಾವರ ಶ್ರೀಗಳು ಜನರಿಗೆ ಕರೆ ನೀಡಿದ್ದಾರೆ.

ಯಶಸ್ವಿ ಚಂದ್ರಯಾನದ ಬಳಿಕ ಸೂರ್ಯನ (Sun) ಅಧ್ಯಯನಕ್ಕೆ ಇಸ್ರೋ ಮುಂದಾಗಿದ್ದು, ಸೆಪ್ಟೆಂಬರ್ 2 ರಂದು ಬೆಳಗ್ಗೆ11:50 ಕ್ಕೆ ಆದಿತ್ಯ L1 (Aditya L1) ಅನ್ನು ಉಡಾವಣೆ ಮಾಡಲು ನಿರ್ಧರಿಸಿದೆ. ಈ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ISRO) ಮಾಹಿತಿ ಹಂಚಿಕೊಂಡಿದ್ದು, ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ ರಾಕೆಟ್ ಉಡಾವಣೆಯಾಗಲಿದೆ ಎಂದು ಹೇಳಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News