ಉಡುಪಿ: ಎಬಿವಿಪಿಯಿಂದ ರಕ್ಷಾಬಂಧನ ಅಭಿಯಾನ; ಪ್ರಮೋದ್ ಮಧ್ವರಾಜ್ ಗೆ ರಾಖಿ ಕಟ್ಟಿದ ವಿದ್ಯಾರ್ಥಿಗಳು

ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತು ಈ ಬಾರಿ ಸಾರ್ವಜನಿಕವಾಗಿ ರಕ್ಷಾಬಂಧನ ಕಾರ್ಯಕ್ರಮ ಹಮ್ಮಿಕೊಂಡಿದೆ. ಸುಮಾರು 15 ವಿದ್ಯಾರ್ಥಿಗಳು ವಿವಿಧ ಸಂಘ-ಸಂಸ್ಥೆಗಳು ಗಣ್ಯ ವ್ಯಕ್ತಿಗಳನ್ನ ಭೇಟಿಯಾಗಿ ರಕ್ಷಾಬಂಧನ ಕಾರ್ಯಕ್ರಮ ಮಾಡಿದರು.
ಮಾಜಿ ಸಚಿವ, ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ಅವರಿಗೆ ಎಬಿವಿಪಿಯ ಸದಸ್ಯರು ರಾಖಿ ಕಟ್ಟಿದರು. ಕಾಲೇಜು ವಿದ್ಯಾರ್ಥಿಗಳ ಜೊತೆ ಭಾರತೀಯ ಸಂಸ್ಕೃತಿಯ ವಿಚಾರವಾಗಿ ಪ್ರಮೋದ್ ಮಧ್ವರಾಜ್ ಕೆಲಕಾಲ ಮಾತುಕತೆ ಮಾಡಿದರು.

You cannot copy content from Baravanige News

Scroll to Top