Saturday, April 20, 2024
Homeಸುದ್ದಿಮಣಿಪಾಲ : ಮಾದಕ ವಸ್ತು ಸೇವನೆ ಪ್ರಕರಣ - ನಾಲ್ವರು ವಶಕ್ಕೆ

ಮಣಿಪಾಲ : ಮಾದಕ ವಸ್ತು ಸೇವನೆ ಪ್ರಕರಣ – ನಾಲ್ವರು ವಶಕ್ಕೆ

ಉಡುಪಿ : ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಸೆನ್ ಅಪರಾಧ ಪೋಲೀಸರು ಮಣಿಪಾಲ ಪರಿಸರದಲ್ಲಿ ನಾಲ್ವರನ್ನು ವಶಪಡಿಸಿಕೊಂಡಿದ್ದಾರೆ. ಶರಣ್ ಆರ್ ಕೆ (21),ಪೂರ್ಣ ಸೋಮೇಶ್ವರ (23),ನಿಯಾಲ್ ಗೋವೆಸ್(20),ಶಿನ್ನೆತ್ ಡಿಸೋಜ (27) ನಾಲ್ವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಉಡುಪಿ ಸೆನ್ ಅಪರಾಧ ಪೋಲೀಸ್ ಠಾಣೆಯ ಪೋಲೀಸ್ ಉಪನಿರೀಕ್ಷಕ ನಾರಾಯಣ ಅವರು ಇತರ ಸಿಬ್ಬಂದಿಗಳೊಂದಿಗೆ ಮಣಿಪಾಲದ ವಿದ್ಯಾರತ್ನ ನಗರದ ರೊಯಲ್ ಎಂಬಸ್ಪಿ ಬಳಿಯ ಸಾರ್ವಜನಿಕ ಸ್ಥಳಕ್ಕೆ ತೆರಳಿ ಅಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತು ಸೇವಿಸಿರುವಂತೆ ಕಂಡು ಬಂದ ಯುವಕರನ್ನು ಅನುಮಾನದ ಮೇರೆಗೆ ವಶಕ್ಕೆ ತೆಗೆದುಕೊಂಡು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು.ಇವರ ಮೇಲೆ ಇದೀಗ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News