ಕುಂದಾಪುರ: ಎಸ್‌ಐಗೆ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಲು ಯತ್ನ..!!

ಕುಂದಾಪುರ, ಆ.22: ಸಾರ್ವಜನಿಕರಿಂದ ದೂರು ಬಂದುದನ್ನು ವಿಚಾರಿಸಲು ತೆರಳಿದ ಎಸ್‌ಐ ಮೇಲೆ ಮಹಿಳೆಯೊಬ್ಬರು ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಲು ಪ್ರಯತ್ನಿಸಿದ ಘಟನೆ ನಡೆದಿದೆ.

ಕುಂದಾಪುರ ಠಾಣೆೆ ಎಸ್‌ಐ ವಿನಯ್‌ ಎಮ್‌. ಕೊರ್ಲಹಳ್ಳಿ ಅವರು ಈ ಸಂಬಂಧ ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಿಸಿದ್ದಾರೆ.

ಬೀಜಾಡಿ ಗ್ರಾಮದ ಕೋಟೇಶ್ವರ ಎಂಬಲ್ಲಿ ಫ್ಯಾಶನ್‌ ಡಿಸೈನ್ ಟೈಲರ್‌ ಮತ್ತು ಫ್ಯಾನ್ಸಿ ಸ್ಟೋರ್ಸ್‌ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವ ಮಹಿಳೆ ರಸ್ತೆ ಬದಿಯಲ್ಲಿ ಸಾಮಗ್ರಿಗಳನ್ನು ಇಟ್ಟು ಸಾರ್ವಜನಿಕರಿಗೆ ತೊಂದರೆ ಮಾಡುತ್ತಿರುವುದಾಗಿ ದೂರು ಕರೆ ಬಂದಿತ್ತು.

ನೀವು ಯಾರು ನನ್ನನ್ನು ಕೇಳಲು ಎಂದು ಉದ್ಧಟತನದಿಂದ‌ ಮಾತನಾಡಿ , ಹೊಡೆಯಲು ಬಂದಿದ್ದರೆಂಬ ವಿಚಾರಣೆಗೆ ಎಸ್‌ಐ ಅಂಗಡಿಯಲ್ಲಿದ್ದ ಮಹಿಳೆಯಲ್ಲಿ ಕೇಳಿದಾಗ, ಮಾಲಕಿ ಸರೋಜ ದಾಸ್‌ (43) ಏಕಾಏಕಿ ಸೀಮೆ ಎಣ್ಣೆಯ ಬಾಟಲಿಯಿಂದ ಸೀಮೆ ಎಣ್ಣೆಯನ್ನು ಸಮವಸ್ತ್ರದಲ್ಲಿದ್ದ ಎಸ್‌ಐ ಮೈಗೆ ಹಾಕಲು ಬಂದರು.
ತಪ್ಪಿಸಿಕೊಂಡಾಗ ಸೀಮೆಎಣ್ಣೆಯನ್ನು ಅಲ್ಲಿಯೇ ಕೆಳಗೆ ಹಾಕಿ ಬೆಂಕಿ ಹಾಕಿದರು.

Scroll to Top