ಉಡುಪಿ : ಎನ್ಐಎ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಬಂಧನ ಭೀತಿಯಿಂದ ಉಡುಪಿಯಲ್ಲಿ ತಲೆಮರೆಸಿಕೊಂಡಿರುವ ಪಕ್ಕದ ಜಿಲ್ಲೆಯ ಪಿಎಫ್ಐ ಮುಖಂಡರೊಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಇಂದು ದೇಶದಾದ್ಯಂತ ಎನ್ಐಎ ಅಧಿಕಾರಿಗಳು ಪಿಎಫ್ಐ ಮುಖಂಡನ ಮನೆ ಹಾಗೂ ಕಛೇರಿಗೆ ದಾಳಿ ನಡೆಸಿದ್ದು, ಮಂಗಳೂರಿನಲ್ಲೂ ದಾಳಿ ನಡೆದಿದೆ. ಈಗಾಗಲೇ ನಾಲ್ವರು ಪಿಎಫ್ಐ ಮುಖಂಡರ ಬಂಧನವಾಗಿದ್ದು ಪಕ್ಕದ ಜಿಲ್ಲೆಯ ಪಿಎಫ್ಐ ಮುಖಂಡರೊಬ್ಬರು ಬಂಧನ ಭೀತಿಯಿಂದ ಉಡುಪಿಯಲ್ಲಿ ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಈ ನಡುವೆ ಕಾಪು, ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವರ ಮೊಬೈಲ್ ನಂಬರ್ ಲೊಕೇಶನ್ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಈ ಎರಡು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪೋಲಿಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
![](https://i0.wp.com/www.baravanige.com/wp-content/uploads/2022/09/375_250-investigation_magnifying_glass_thinkstockphotos_473800928-optimized.png?resize=375%2C250&ssl=1)