Saturday, May 4, 2024
Homeಸುದ್ದಿರಾಜ್ಯಾದ್ಯಂತ ಒಂದೇ ವಾರದಲ್ಲಿ 40,477 ಮಂದಿಗೆ 'ಮದ್ರಾಸ್ ಐ' ಸೋಂಕು; ಕರಾವಳಿಯಲ್ಲೂ ಉಲ್ಬಣ, ಮುಂಜಾಗ್ರತೆ ಹೇಗೆ..?

ರಾಜ್ಯಾದ್ಯಂತ ಒಂದೇ ವಾರದಲ್ಲಿ 40,477 ಮಂದಿಗೆ ‘ಮದ್ರಾಸ್ ಐ’ ಸೋಂಕು; ಕರಾವಳಿಯಲ್ಲೂ ಉಲ್ಬಣ, ಮುಂಜಾಗ್ರತೆ ಹೇಗೆ..?

ರಾಜ್ಯದೆಲ್ಲೆಡೆ ಕಾಣಿಸಿಕೊಂಡಿರುವ ಮದ್ರಾಸ್ ಐ ಪ್ರಕರಣಗಳು ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಏರಿಕೆಯಾಗಿದ್ದು, ಸಾರ್ವಜನಿಕರು ಈ ಬಗ್ಗೆ ಜಾಗೃತಗೊಂಡು ಎಚ್ಚರಿಕೆಯಿಂದ ಇರಲು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮಕ್ಕೆ ವಿವರಿಸಿದ ಅವರು, ಮದ್ರಾಸ್ ಐ ಎಂಬುದು ವೈರಸ್ ಮೂಲಕ ಹರಡುತ್ತದೆ. ಸೋಂಕು ತಗುಲಿದವರ ಕಣ್ಣುಗಳು ಕೆಂಪು ಬಣ್ಣಕ್ಕೆ ತಿರುಗಿ ಕಣ್ಣಿನಲ್ಲಿ ಕಿರಿಕಿರಿ ಅನುಭವವಾಗುತ್ತದೆ. ಜತೆಗೆ ನೀರು ಸೋರುತ್ತಿರುತ್ತದೆ. ಕಣ್ಣಿನಲ್ಲಿ ಸೋಂಕಿನ ಪ್ರಮಾಣ ಹೆಚ್ಚಾದರೆ ವ್ಯಕ್ತಿಯ ಕುತ್ತಿಗೆಯಲ್ಲಿ ಹಾಗೂ ತಲೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ಮೇಲಿನ ಲಕ್ಷಣಗಳು ಕಂಡುಬಂದರೆ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕೆಂದು ಸಲಹೆ ನೀಡಿದರು.

ರಾಜ್ಯದಾದ್ಯಂತ ಜುಲೈ 25 ರಿಂದ ಆಗಸ್ಟ್ 4ರ ವರೆಗೆ 40,477 ಪ್ರಕರಣಗಳು ಪತ್ತೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 504 ಮದ್ರಾಸ್ ಐ ಪ್ರಕರಣಗಳು ಇದುವರೆಗೆ ವರದಿಯಾಗಿದೆ. ಕಲಬುರ್ಗಿ ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲೂ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಪ್ರಾಥಮಿಕ ಹಂತದಲ್ಲೇ ಈ ರೋಗವನ್ನು ಪತ್ತೆ ಹಚ್ಚಿ ಜಾಗೃತರಾಗಿರಬೇಕು ಎಂದರು.

ಮುನ್ನೆಚ್ಚರಿಕೆ ವಹಿಸುವುದು ಅಗತ್ಯ

ಸೋಂಕಿನಿಂದ ಬಳಲುತ್ತಿರುವವರು ಶುದ್ಧ ಕರವಸ್ತ್ರವನ್ನು ಬಳಸಿ ಕಣ್ಣೀರನ್ನು ಸ್ವಚ್ಛಗೊಳಿಸುತ್ತಿರಬೇಕು. ಆ ಕರವಸ್ತ್ರವನ್ನು ಬೇರೆಯವರು ಮುಟ್ಟದಂತೆ ನೋಡಿಕೊಳ್ಳಬೇಕು. ಇನ್ನೂ ಕಣ್ಣಿನಲ್ಲಿ ಕಿರಿಕಿರಿ ಉಂಟಾದಾಗ ಉಜ್ಜುವುದನ್ನು ಮಾಡಿದರೆ ಮತ್ತಷ್ಟು ಕಣ್ಣು ಊದಿಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಮದ್ರಾಸ್ ಐ ಸೋಂಕಿನಿಂದ ಬಳಲುತ್ತಿರುವವರು ಸಾರ್ವಜನಿಕ ಸ್ಥಳಗಳಿಂದ ದೂರ ಉಳಿದು, ಮನೆಯಲ್ಲಿಯೇ ಎರಡು ದಿನ ಇರಲು ಪ್ರಯತ್ನಿಸಬೇಕು. ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡರೆ ಎರಡು ದಿನ ಶಾಲೆಗೆ ಕಳುಹಿಸದಿರುವುದು ಉತ್ತಮ.

ಈ ಸೋಂಕಿಗೆ ಚಿಕಿತ್ಸೆಯು ಎಲ್ಲ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನೀಡಲಾಗುತ್ತಿದೆ. ಈ ಸಂಬಂಧ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವಂತೆ ಡಿಡಿಪಿಐಗೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News