Wednesday, April 24, 2024
Homeಸುದ್ದಿಅಂತಃರೂಪ - ಅರ್ಥವಾಗದ ಕಥೆ ಕಿರುಚಿತ್ರದ ಬಿಡುಗಡೆಗೆ ಕ್ಷಣಗಣನೆ

ಅಂತಃರೂಪ – ಅರ್ಥವಾಗದ ಕಥೆ ಕಿರುಚಿತ್ರದ ಬಿಡುಗಡೆಗೆ ಕ್ಷಣಗಣನೆ

ಕರಾವಳಿ ಕಲಾವಿದರ ಕ್ರಿಯೇಟಿವಿಟಿ ಜತೆಗೆ ಇದೀಗ ಹೊಸ ಚಿತ್ರವೊಂದು ಸಜ್ಜಾಗಿದೆ. ಈಗಾಗಲೇ ಚಿತ್ರದ ಟೈಟಲ್ ಸಾಂಗ್ YES FILMS YouTube ಚಾನೆಲ್ನಲ್ಲಿ ಸುದ್ದಿ ಮಾಡಿದೆ.

ದಂತಿ ಕ್ರಿಯೇಷನ್ಸ್, YES FILMS ಸಹಯೋಗದೊಂದಿಗೆ ಸಂದೀಪ್ ಪೂಜಾರಿ ನಿರ್ಮಿಸಿ ನಿರ್ದೇಶಿಸಿರುವ ಅಂತಃರೂಪ -ಅರ್ಥವಾಗದ ಕಥೆ ಕಿರುಚಿತ್ರ ಸೆಪ್ಟೆಂಬರ್ 23ಕ್ಕೆ ಬಿಡುಗಡೆಗೆ ಸಜ್ಜಾಗಿದೆ.

ಚಿತ್ರಕ್ಕೆ ತೇಜಸ್ ಪೂಜಾರಿ ಅಗತ್ತಾಡಿ ಕಥೆ ಹೆಣೆದಿದ್ದು, ಕಂಬಳಬೆಟ್ಟು ಭಟ್ರೆನ ಮಗಲ್ ಚಿತ್ರದ ನಿರ್ದೇಶಕ ಶರತ್ ಪೂಜಾರಿ ಬಗ್ಗತೋಟ ಛಾಯಾಗ್ರಹಣ ಹಾಗೂ ಸಂಕಲನವಿದೆ.
ಇನ್ನುಳಿದಂತೆ ಸಂಗೀತದಲ್ಲಿ ಚಿದಾನಂದ ಕಡಬ, ಸಂಭಾಷಣೆಯಲ್ಲಿ ಸಂದೀಪ್ ಪೂಜಾರಿ, ತೇಜಸ್ ಪೂಜಾರಿ, ಅನ್ವೇಶ್ ರೈ ನಿರ್ಮಾಣ ನಿರ್ವಹಣೆಯಲ್ಲಿ ಮೂಡಿಬಂದಿರುವ ಚಿತ್ರಕ್ಕೆ ಸಂದೀಪ್ ಪೂಜಾರಿ ಸಾಹಿತ್ಯವಿದೆ.

ರೂಪಾ ವರ್ಕಾಡಿ, ವಿಶ್ವನಾಥ ಅಸೈಗೋಳಿ, ವಿನಾಯಕ್‌ ಜೆಪ್ಪು, ಭರತ್‌ ಶೆಟ್ಟಿ, ಶಿವನ್‌ ಸುವರ್ಣ, ಜೆಸ್ವಿನ್‌ ಮೆಂಡನ್‌, ಸಂದೀಪ್‌, ಮಧು ಮಡ್ಯಾರ್, ಕೌಶಿಕ್ ಅಮೀನ್ ತಾರಾಗಣವಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News