ಉಡುಪಿ : ರಾಜ್ಯದ ಹಲವೆಡೆ ಬೈಕ್ ಕಳವು ಮಾಡಿದ ಕುಖ್ಯಾತನನ್ನು ಉಡುಪಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಬಾಳೆಹೊಸೂರು ನಿವಾಸಿ ಗೋವಿಂದಪ್ಪ ಗಿರೀಶ ಹೇಮಣ್ಣ ಪೂಜಾರ್ ಬಂಧಿತ ಆರೋಪಿ. ಮಂಡ್ಯ ಕೆ ಆರ್ ಪೇಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಉಡುಪಿಯ ಬೀಡಿನ ಗುಡ್ಡೆ, ಕೃಷ್ಣ ಮಠ ಸಮೀಪದ ವಿದ್ಯೋದಯ ಶಾಲಾ ಬಳಿಯೂ ಬೈಕ್ ಕಳುವಾಗಿದ್ದು, ಈತನೆ ಕಳವುಗೈದವ ಎಂದು ಪತ್ತೆ ಮಾಡಲಾಗಿದೆ.
![](https://i0.wp.com/www.baravanige.com/wp-content/uploads/2022/09/IMG-20220922-WA0020-optimized.jpg?resize=696%2C522&ssl=1)