ಉಡುಪಿ: ನಿರಂತರ ಮಳೆ ಹಿನ್ನೆಲೆ, ಜಲಪಾತ, ಬೀಚ್ ಗಳಿಗೆ ಪ್ರವೇಶ ನಿಷೇಧ; ಜಿಲ್ಲಾಧಿಕಾರಿ

ಉಡುಪಿ, ಜು.24: ಜಿಲ್ಲೆಯಾದ್ಯಂತ ಮಳೆ ಮುಂದುವರೆದ ಕಾರಣ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿದೆ.

ಈ ಹಿನ್ನೆಲೆಯಲ್ಲಿ ಜಲಪಾತ, ಬೀಚ್ ಗಳಲ್ಲಿ ವಿಡಿಯೋ ಫೋಟೋ ತೆಗೆಯದಂತೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.

ಕೊಲ್ಲೂರಿನಲ್ಲಿ ಜಲಪಾತ ವೀಕ್ಷಣೆಗೆ ತೆರಳಿದ ಯುವಕ ನೀರುಪಾಲಾದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ಮುಂಜಾಗರೂಕತಾ ದೃಷ್ಟಿಯಿಂದ ಪ್ರವಾಸಿಗರು ಸದ್ಯದ ಮಟ್ಟಿಗೆ ಬರದಂತೆ ಹಾಗೂ ಫೋಟೋ ವಿಡಿಯೋ ತೆಗೆಯುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

You cannot copy content from Baravanige News

Scroll to Top