ಕಾರ್ಕಳ, ಜು.24: ಸರ್ಕಾರಿ ಬಸ್ಸನ್ನು ಓವರ್ ಟೇಕ್ ಮಾಡುವ ಸಂದರ್ಭ ಮುಂದಿನಿಂದ ಬರುತ್ತಿದ್ದ ಟಿಪ್ಪರ್ ವೊಂದಕ್ಕೆ ಖಾಸಗಿ ಬಸ್ಸು ಡಿಕ್ಕಿ ಹೊಡೆದ ಘಟನೆ ಜಾರ್ಕಳ ಬಸ್ರಿ ಶಾಲೆಯ ಬಳಿಯಲ್ಲಿ ನಡೆದಿದೆ.
![](https://i0.wp.com/www.baravanige.com/wp-content/uploads/2023/07/IMG-20230724-WA0013-optimized.jpg?resize=696%2C522&ssl=1)
ಉಡುಪಿಯಿಂದ ಕಾರ್ಕಳ ಕಡೆಯತ್ತ ವೇಗವಾಗಿ ಬಂದ ಖಾಸಗಿ ಎಕ್ಸ್ ಪ್ರೆಸ್ ಬಸ್ಸು ಎದುರಿನಿಂದ ಹೋಗುತ್ತಿದ್ದ ಸರ್ಕಾರಿ ಬಸ್ಸನ್ನು ಓವರ್ ಟೇಕ್ ಮಾಡುವ ವೇಳೆ ಕಾರ್ಕಳದಿಂದ ಉಡುಪಿಯತ್ತ ಬರುತ್ತಿದ್ದ ಟಿಪ್ಪರಿಗೆ ಡಿಕ್ಕಿ ಹೊಡೆದು ಬಸ್ಸು ಚಾಲಕ ಗಾಯಗೊಂಡ ಘಟನೆ ನಡೆದಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
![](https://i0.wp.com/www.baravanige.com/wp-content/uploads/2023/07/IMG-20230724-WA0017-optimized.jpg?resize=696%2C522&ssl=1)
![](https://i0.wp.com/www.baravanige.com/wp-content/uploads/2023/07/IMG-20230724-WA0016-optimized.jpg?resize=696%2C522&ssl=1)
![](https://i0.wp.com/www.baravanige.com/wp-content/uploads/2023/07/IMG-20230724-WA0018-1-optimized.jpg?resize=696%2C522&ssl=1)