Saturday, July 27, 2024
Homeಸುದ್ದಿಕರಾವಳಿಪುಡಿ ರೌಡಿಗಳಿಂದ ಬಾರ್ ಮುಂಭಾಗದಲ್ಲಿ ದಾಂಧಲೆ!

ಪುಡಿ ರೌಡಿಗಳಿಂದ ಬಾರ್ ಮುಂಭಾಗದಲ್ಲಿ ದಾಂಧಲೆ!

ಉಡುಪಿ : ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರಿನ ಬಾರ್‌ವೊಂದರ ಮುಂಭಾಗದಲ್ಲಿ ಕಂಠಪೂರ್ತಿ ಮದ್ಯಪಾನ ಮಾಡಿದ ಪುಡಿ ರೌಡಿಗಳ ತಂಡವೊಂದು ಅಟ್ಟಹಾಸ ಮೆರೆದಿರುವ ಘಟನೆ ನಡೆದಿದೆ.

ವಾಹನಕ್ಕೆ ಅಡ್ಡ ಬಂದ ಕಾರಣ ಆರಂಭವಾದ ಯುವಕರ ಪರಸ್ಪರ ಹಲ್ಲೆ , ವಾಗ್ವಾದ ಜೋರಾಗಿದೆ.

ಟಾಟಾ ಏಸ್ ವಾಹನದಲ್ಲಿದ್ದ ರಮೇಶ್ ದೇವಾಡಿಗ ಹಾಗೂ ರವಿ ಪೂಜಾರಿ ಮೇಲೆ ಪುಡಿ ರೌಡಿಗಳಿಂದ ಹಲ್ಲೆ ನಡೆದಿದೆ.

ಪ್ರಕರಣದ ದೃಶೃಗಳು ಬಾರ್‌ ಮುಂಭಾಗದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರೌಡಿಗಳ ತಂಡ ಅಲ್ಲೇ ಪಾರ್ಕಿಂಗ್‌ ಮಾಡಿದ್ದ ವಾಹನದ ಗಾಜನ್ನು ಹೆಲ್ಮೆಟ್ ಹಾಗೂ ಸೋಡಾ ಬಾಟಲಿಯಿಂದ ಜಖಂಗೊಳಿಸಿದೆ.

ಘಟನಾ ಸ್ಥಳಕ್ಕೆ ಬೈಂದೂರು ಪೊಲೀಸರು ಆಗಮಿಸುತ್ತಿದ್ದಂತೆ ರೌಡಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News