ಬಂಟಕಲ್ಲು, ಜು.17: ಇಂಜಿನಿಯರಿಂಗ್ ಕಾಲೇಜ್ ನ ಮುಂಬದಿಯಲ್ಲಿರುವ ಹಲವು ಬಾರಿ ಪ್ಯಾಚ್ ವರ್ಕ್, ಕಪ್ಪು ಪೈಂಟ್ ನ್ನೇ ಅಳವಡಿಸಿ ತಾತ್ಕಾಲಿಕ ಸರಿಮಾಡುವ ಈ ರಸ್ತೆಗೆ ಶಾಶ್ವತ ಪರಿಹಾರ ಸಿಗಬಹುದೇ.!? ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜ್ ನ ಮುಂಬದಿಯಲ್ಲಿರುವ ರಾಜ್ಯ ಹೆದ್ಧಾರಿ ಹದಗೆಟ್ಟಿದ್ದು, ರಸ್ತೆಗಳಲ್ಲೆಲ್ಲಾ ಹೊಂಡಗಳೇ ತುಂಬಿವೆ.
ಸಾವಿರಾರು ವಾಹನಗಳು ಓಡಾಡುವ ಈ ರಸ್ತೆಯಲ್ಲಿ 1-2 ಫೀಟ್ ಆಳವಿರುವ ಈ ಹೊಂಡಗಳನ್ನು ಕಂಡರೆ ಭಯ ಆಗುತ್ತದೆ. ದ್ವಿಚಕ್ರ, ತ್ರಿಚಕ್ರ, ಹಾಗೂ ಲಘು ವಾಹನಗಳಿಗೆ ಈ ರಸ್ತೆಯಲ್ಲಿ ಸಂಚಾರಿಸುವುದು ಒಂದು ದೊಡ್ಡ ಗುರಿ.
ಕಟಪಾಡಿ ಶಂಕರಪುರದಿಂದ ಬರುವ ವಾಹನಗಳು ತಮ್ಮ ಎಡ ಭಾಗದಲ್ಲಿ ಚಲಿಸುವ ಬದಲು, ಬಲ ಬದಿಗೆ ಬಂದು ಹಾದು ಹೋಗುತ್ತಿವೆ.
ಹೀಗಾಗಿ ಹಲವಾರು ಅಪಘಾತಗಳು ಈಗಾಗಲೇ ಈ ಸ್ಥಳದಲ್ಲಿ ಆದು ಹೋಗಿವೆ. ಆದರೂ ಎಚ್ಚೆತ್ತುಕೊಳ್ಳದ ಈ ರಸ್ತೆ ಅಭಿವೃದ್ಧಿ ಇಲಾಖೆಗಳು ಸುಮ್ಮನಿರುವುದು ಬೇಸರದ ಸಂಗತಿ ಎಂದು ಸಾರ್ವಜನಿಕರು ಅಭಿಪ್ರಾಯಿಸುತ್ತಿದ್ದಾರೆ.