ಜಾಗದ ತಕರಾರು; ಪಕ್ಕದ ಮನೆಯ ನಾಯಿಗೆ ಗುಂಡಿಟ್ಟು ಹತ್ಯೆ

ಹೆಬ್ರಿ, ಜೂ.17: ಪೆರ್ಡೂರು ಗ್ರಾಮದ ಅಲಂಗಾರು ಅಂತುಬೆಟ್ಟುವಿನಲ್ಲಿ ಜಾಗದ ತಕರಾರಿನ ಕಾರಣ ರಾಜೇಂದ್ರ ಪ್ರಸಾದ್‌ ಶೆಟ್ಟಿ ಎಂಬವರು ಪಕ್ಕದ ಮನೆಯ ನಾಯಿಯನ್ನು ಗುಂಡಿಟ್ಟು ಕೊಂದಿದ್ದು, ಇದನ್ನು ವಿಚಾರಿಸಲು ಮುಂದಾದವರನ್ನು ಕೊಲ್ಲುತ್ತೇನೆ ಎನ್ನುವುದಾಗಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಭಾರತಿ ಸುಧಾಕರ ಪೂಜಾರಿ ಅವರು ಹಿರಿಯಡಕ ಠಾಣೆಗೆ ದೂರು ನೀಡಿದ್ದಾರೆ.

ಜೂ. 13ರಂದು ಬೆಳಗ್ಗೆ ರಾಜೇಂದ್ರ ಪ್ರಸಾದ್‌ಶೆಟ್ಟಿಯವರು ಭಾರತಿ ಸುಧಾಕರ ಪೂಜಾರಿ ಅವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಸಾಕು ನಾಯಿಯನ್ನು ತನ್ನ ಬಳಿ ಇರುವ ಬಂದೂಕಿನಿಂದ ಗುಂಡು ಹಾರಿಸಿ ಕೊಲ್ಲಲು ಯತ್ನಿಸಿದ್ದು, ಗದ್ದೆಯಲ್ಲಿ ಜೀವನ್ಮರಣದ ಹೋರಾಟದಲ್ಲಿದ್ದ ನಾಯಿ ಮೃತಪಟ್ಟಿತ್ತು.

ಈ ಬಗ್ಗೆ ರಾಜೇಂದ್ರ ಪ್ರಸಾದ್‌ ಶೆಟ್ಟಿಯವರನ್ನು ಕೇಳಿದಾಗ ಇವತ್ತು ನಾಯಿಯನ್ನು ಕೊಲ್ಲುತ್ತಿದ್ದು, ಇನ್ನು ಮುಂದಕ್ಕೆ ಯಾರನ್ನೂ ಬಿಡುವುದಿಲ್ಲ ನಿಮ್ಮನ್ನು ಕೊಂದು ಹೊಂಡ ತೆಗೆದು ಮಣ್ಣು ಹಾಕಿ ಮುಚ್ಚುತ್ತೇನೆ ಎಂಬುದಾಗಿ ಬೆದರಿಕೆ ಹಾಕಿರುವುದಾಗಿ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top