Saturday, May 11, 2024
Homeಸುದ್ದಿಕಾರ್ಕಳ: ಸ್ಕೂಟರ್‌ಗೆ ಅಡ್ಡ ಬಂದ ಪ್ರಾಣಿ; ಗಂಭೀರ ಗಾಯಗೊಂಡಿದ್ದ ಸವಾರ ಮೃತ್ಯು

ಕಾರ್ಕಳ: ಸ್ಕೂಟರ್‌ಗೆ ಅಡ್ಡ ಬಂದ ಪ್ರಾಣಿ; ಗಂಭೀರ ಗಾಯಗೊಂಡಿದ್ದ ಸವಾರ ಮೃತ್ಯು

ಕಾರ್ಕಳ, ಮೇ 29: ಕಾರ್ಕಳದಲ್ಲಿ ಚಲಾಯಿಸುತಿದ್ದ ಸ್ಕೂಟರ್‌ಗೆ ಯಾವುದೋ ಪ್ರಾಣಿ ಅಡ್ಡ ಬಂದ ಹಿನ್ನಲೆಯಲ್ಲಿ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡು ಸವಾರ ಮೃತ ಪಟ್ಟ ಘಟನೆ ನಡೆದಿದೆ.

ಸದಾನಂದ ಶೆಟ್ಟಿ (45) ಮೃತಪಟ್ಟ ವ್ಯಕ್ತಿ.

ಸದಾನಂದ ಅವರು ತನ್ನ ಮಗನೊಂದಿಗೆ ಶಿರ್ಲಾಲಿನಲ್ಲಿರುವ ಸಂಬಂಧಿಕರ ಮನೆಗೆ ಕಾರ್ಯಕ್ರಮಕ್ಕೆ ತೆರಳಿದ್ದು, ವಾಪಾಸ್ಸು ಬರುವಾಗ ಹಿರ್ಗಾನ ಗ್ರಾಮದ ಬಿ ಎಮ್ ಶಾಲೆಯ ಬಳಿ ತಲುಪುವಾಗ ಯಾವುದೋ ಪ್ರಾಣಿಯೊಂದು ರಸ್ತೆಯಲ್ಲಿ ಅಡ್ಡ ಬಂದ ಕಾರಣ ಸ್ಕೂಟರ್ ಸವಾರಿ ಮಾಡುತ್ತಿದ್ದ ಸದಾನಂದ ಶೆಟ್ಟಿರವರು ಸ್ಕೂಟರ್‌ಗೆ ಒಮ್ಮೆಲೇ ಬ್ರೇಕ್ ಹಾಕಿದ್ದಾರೆ.

ಇನ್ನು ಈ ವೇಳೆ ಸ್ಕೂಟರ್‌ನೊಂದಿಗೆ ಸದಾನಂದ ಶೆಟ್ಟಿ ಮತ್ತು ಮಗ ಸ್ಪರ್ಷ್ ರಸ್ತೆಗೆ ಬಿದ್ದ ಪರಿಣಾಮ ಸದಾನಂದ ಶೆಟ್ಟಿರವರಿಗೆ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದುವು.

ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ರವಾನಿಸಿ, ಅಲ್ಲಿಂದ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು. ಆದರೆ ತಲೆಗೆ ಗಂಭೀರ ಗಾಯಗೊಂಡ ಸದಾನಂದ ಶೆಟ್ಟಿರವರು ಚಿಕಿತ್ಸೆಗೆ ಸ್ಪಂದಿಸದೇ ಶನಿವಾರ ಸಾವನ್ನಪ್ಪಿದ್ದಾರೆ.

ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News