ಚುನಾವಣಾ ಪ್ರಚಾರದ ವೇಳೆ ಕಿಚ್ಚನನ್ನು ಕಂಡು ವಾಹನ ಏರಿ ಬಂದ ಅಭಿಮಾನಿ; ಸುದೀಪ್ ಎದುರು ಮುಗ್ಗರಿಸಿ ಬಿದ್ದ ಸೋಮಣ್ಣ..!

ಚುನಾವಣಾ ಪ್ರಚಾರದ ವೇಳೆ ಜನಸ್ತೋಮದ ನಡುವೆ ಸಚಿವ ಸೋಮಣ್ಣ ಆಯತಪ್ಪಿ ಬಿದ್ದಿದ್ದಾರೆ. ಈ ವೇಳೆ ಕಿಚ್ಚ ಸುದೀಪ್ ಕೂಡ ಅವರ ಜೊತೆಗಿದ್ದರು. ಆದರೆ ಅದೃಷ್ಟವೆಂದರೆ ಕಿಚ್ಚ ಅವರು ಸಚಿವ ಸೋಮಣ್ಣ ಬೀಳದಂತೆ ಹಿಡಿದಿದ್ದಾರೆ. ಹೀಗಾಗಿ ದೊಡ್ಡ ಅವಾಂತರ ತಪ್ಪಿ ಹೋಗಿದೆ.

ಏನಿದು ಘಟನೆ?

ಚಾಮರಾಜ ನಗರದ ಸಂತೆ ಮಾರನಹಳ್ಳಿಯಲ್ಲಿ ಈ ಘಟನೆ ನಡಿದಿದೆ. ಬಿಜೆಪಿ ಪ್ರಚಾರ ವೇಳೆ, ತುಂಬಿರುವ ಜನಸ್ತೋಮದ ನಡುವೆ ಅದ್ಧೂರಿ ಪ್ರಚಾರ ಏರ್ಪಡಿಸಲಾಗಿತ್ತು. ಈ ವೇಳೆ ವಾಹನ ವೇಲೆ ನಿಂತು ಸಚಿವ ಸೋಮಣ್ಣ ಮತ್ತು ಕಿಚ್ಚ ಸುದೀಪ್​ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು. ಈ ವೇಳೆ ಹಿಂಬದಿಯಿಂದ ಬಂದ ಅಭಿಮಾನಿ ಕಿಚ್ಚನನನ್ನು ನೋಡಿ ವಾಹನದ ಮೇಲೆ ಹತ್ತಿ ಬರುತ್ತಾನೆ. ಈ ವೇಳೆ ಸೋಮಣ್ಣ ಅವರನ್ನು ಹಿಡಿಯುತ್ತಾನೆ. ಇದರಿಂದಾಗಿ ವ್ಯಕ್ತಿ ಮತ್ತು ಸೋಮಣ್ಣ ಆಯತಪ್ಪಿ ಬೀಳುತ್ತಾರೆ. ಆದರೆ ಕಿಚ್ಚ ಅಲ್ಲೇ ಪಕ್ಕದಲ್ಲಿ ಇದ್ದ ಕಾರಣ ಸೋಮಣ್ಣ ಅವರನ್ನು ಗಟ್ಟಿಯಾಗಿ ಹಿಡಿದಿದ್ದಾರೆ. ಆದ್ದರಿಂದ ಅವಘಡವೊಂದು ಕಿಚ್ಚನಿಂದಾಗಿ ತಪ್ಪಿ ಹೋಗಿದೆ.

You cannot copy content from Baravanige News

Scroll to Top