Thursday, April 25, 2024
Homeಸುದ್ದಿದ.ಕ- 7, ಉಡುಪಿ 3 ನಾಮಪತ್ರಗಳು ತಿರಸ್ಕೃತ

ದ.ಕ- 7, ಉಡುಪಿ 3 ನಾಮಪತ್ರಗಳು ತಿರಸ್ಕೃತ

ಮಂಗಳೂರು/ಉಡುಪಿ: ವಿಧಾನಸಭಾ ಚುನಾವಣೆ ಸಂಬಂಧ ಶುಕ್ರವಾರ ನಾಮಪತ್ರ ಪರಿಶೀಲನೆ ನಡೆಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 7 ಹಾಗೂ ಉಡುಪಿ ಜಿಲ್ಲೆಯಲ್ಲಿ 3 ನಾಮಪತ್ರಗಳು ತಿರಸ್ಕೃತಗೊಂಡಿವೆ.

ಒಟ್ಟೂ ದ.ಕ ಜಿಲ್ಲೆಯಲ್ಲಿ 72 ಅಭ್ಯರ್ಥಿಗಳ ಹಾಗೂ ಉಡುಪಿ ಜಿಲ್ಲೆಯಲ್ಲಿ 39 ಮಂದಿಯ ನಾಮಪತ್ರಗಳು ಸ್ವೀಕಾರಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 109 ನಾಮಪತ್ರ ಸಲ್ಲಿಕೆಯಾಗಿದ್ದರೆ, ಉಡುಪಿ ಜಿಲ್ಲೆಯಲ್ಲಿ 88 ನಾಮಪತ್ರ ಸಲ್ಲಿಕೆಯಾಗಿದ್ದವು.

ಮಂಗಳೂರು ನಗರ ಉತ್ತರದಲ್ಲಿ ಒಂದು ಹಾಗೂ ಮಂಗಳೂರು ನಗರ ದಕ್ಷಿಣ, ಮಂಗಳೂರು ಹಾಗೂ ಬಂಟ್ವಾಳದಲ್ಲಿ ತಲಾ ಎರಡು ನಾಮಪತ್ರಗಳು ತಿರಸ್ಕೃತಗೊಂಡಿವೆ.
ಬೆಳ್ತಂಗಡಿ -10, ಮೂಡುಬಿದಿರೆ ಯಲ್ಲಿ – 9, ಮಂಗಳೂರು ನಗರ ಉತ್ತರ -12, ಮಂಗಳೂರು ನಗರ ದಕ್ಷಿಣ -8, ಮಂಗಳೂರು -8, ಬಂಟ್ವಾಳ -6, ಪುತ್ತೂರು -10 ಹಾಗೂ ಸುಳ್ಯದ 9 ಅಭ್ಯರ್ಥಿಗಳ ನಾಮಪತ್ರಗಳು ಕ್ರಮ ಬದ್ಧವಾಗಿವೆ. ಎ. 24 ನಾಮಪತ್ರ ಹಿಂಪಡೆಯಲು ಕೊನೆಯ ದಿನ.

ಹಾಗೆಯೇ ಉಡುಪಿ ಜಿಲ್ಲೆಯ ಕುಂದಾಪುರ ದಿಂದ ಶಂಕರ ಅಂಕದಕಟ್ಟೆ, ಕಾರ್ಕಳ ದಿಂದ ಉದಯಕುಮಾರ್‌ ಎಂ., ದಯಾನಂದ ಶೆಟ್ಟಿಯವರ ನಾಮಪತ್ರ ತಿರಸ್ಕೃತಗೊಂಡಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News