Saturday, April 20, 2024
Homeಸುದ್ದಿಕರಾವಳಿಉಡುಪಿ: ಶತಾಯುಷಿ ಮತದಾರರ ಮನೆ ಬಾಗಿಲಿಗೆ ತೆರಳಿ ಮತದಾನಕ್ಕೆ ಆಹ್ವಾನಿಸಿದ ಅಧಿಕಾರಿ

ಉಡುಪಿ: ಶತಾಯುಷಿ ಮತದಾರರ ಮನೆ ಬಾಗಿಲಿಗೆ ತೆರಳಿ ಮತದಾನಕ್ಕೆ ಆಹ್ವಾನಿಸಿದ ಅಧಿಕಾರಿ

ಉಡುಪಿ : ತಾಲೂಕು ಪಂಚಾಯತ್ ಮತ್ತು ಉಡುಪಿ ನಗರಸಭಾ ವ್ಯಾಪ್ತಿಯ ಶತಾಯುಷಿ ಮತದಾರರಿಗೆ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಮತದಾನದಲ್ಲಿ ಭಾಗವಹಿಸಲು ಆಹ್ವಾನ ಪತ್ರಿಕೆಯನ್ನು ಅವರುಗಳ ಮನೆ ಬಾಗಿಲಿಗೆ ತೆರಳಿ ತಾಲೂಕು ಪಂಚಾಯತಿನ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಉಡುಪಿ ತಾಲೂಕು ಸ್ವೀಪ್ ಸಮಿತಿಯ ಅಧ್ಯಕ್ಷರಾಗಿರುವ ವಿಜಯಾ ಇವರು ನೀಡಿದರು.


ಶತಾಯುಷಿ ಮತದಾರರುಗಳಾದ ಲಿಯೋನೋ ರೊಡ್ರಿಗಸ್ ದೊಡ್ಡಣ್ಣಗುಡ್ಡೆ, ಲಕ್ಷ್ಮಿ ನಿಟ್ಟೂರು – ಕರಂಬಳ್ಳಿ, ರಾಧಾ ಹೆಗ್ಡೆ ಕೊಡವೂರು, ರಾಮದಾಸ್ ಕಾಮತ್ ಒಳಕಾಡು, ಮೇರಿ ದಾಂತಿ ಕುತ್ಪಾಡಿ, ಈ ಐದು ಶತಾಯುಷಿ ಮತದಾರರು ಆಹ್ವಾನ ಪಡೆದ ಮತದಾರರಾಗಿದ್ದಾರೆ.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ವೀಣಾ ವಿವೇಕಾನಂದ, ತಾ ಪಂ ನ ವ್ಯವಸ್ಥಾಪಕ ಸುರೇಶ್, ಸಿಬ್ಬಂದಿ ಚಂದ್ರ ನಾಯ್ಕ್ ,ಕಾಪು ತಾಲೂಕು ಚುನಾವಣಾ ಶಾಖಾ ಸಿಬ್ಬಂದಿಗಳು ಮತ್ತು ಮತಗಟ್ಟೆ ಅಧಿಕಾರಿಗಳು ಕಾರ್ಯನಿರ್ವಹಣಾಧಿಕಾರಿಯವರ ಜೊತೆಯಲ್ಲಿದ್ದು ಮತದಾನಕ್ಕೆ ಆಹ್ವಾನಿಸಿದರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News