Wednesday, April 24, 2024
Homeಸುದ್ದಿರಾಜ್ಯಕಾಂಗ್ರೆಸ್ ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ

ಕಾಂಗ್ರೆಸ್ ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ.

ಈಗಾಗಲೇ ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಇದೀಗ 43 ಕ್ಷೇತ್ರಗಳಿಗೆ ಮೂರನೇ ಪಟ್ಟಿಯಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಈ 43 ಅಭ್ಯರ್ಥಿಗಳ ಪಟ್ಟಿಯಲ್ಲಿ 16 ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ.

224 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಈಗಾಗಲೇ ಮೊದಲ ಪಟ್ಟಿಯಲ್ಲಿ 166, ಎರಡನೇ ಪಟ್ಟಿಯಲ್ಲಿ 23 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿತ್ತು. ಇದೀಗ ಮೂರನೇ ಪಟ್ಟಿಯಲ್ಲಿ 43 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದ್ದು, ಇನ್ನೂ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸದೇ ಬಾಕಿ ಉಳಿಸಿಕೊಂಡಿದೆ. ಇದರಲ್ಲಿ ಹಾಲಿ ಶಾಸಕರಿರುವ 4 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸದಿರುವುದು ಅಚ್ಚರಿಗೆ ಕಾರಣವಾಗಿದೆ.

ಮೂರನೇ ಪಟ್ಟಿ ಇಂತಿದೆ


ಅರಭಾವಿ ಕ್ಷೇತ್ರ-ಅರವಿಂದ ದಳವಾಯಿ
ಕೋಲಾರ ಕ್ಷೇತ್ರ-ಕೊತ್ತೂರು ಮಂಜುನಾಥ
ಚಿಕ್ಕಪೇಟೆ ಕ್ಷೇತ್ರ-ಆರ್.ವಿ.ದೇವರಾಜ್
ಅರಸೀಕೆರೆ ಕ್ಷೇತ್ರ-ಕೆ.ಎಂ.ಶಿವಲಿಂಗೇಗೌಡ
ಬೊಮ್ಮನಹಳ್ಳಿ ಕ್ಷೇತ್ರ-ಉಮಾಪತಿ ಶ್ರೀನಿವಾಸಗೌಡ
ಕುಂದಗೋಳ ಕ್ಷೇತ್ರ-ಕುಸುಮಾ ಶಿವಳ್ಳಿ
ರಾಯಬಾಗ ಕ್ಷೇತ್ರ-ಮಹಾವೀರ ಮೋಹಿತ್
ಬೆಳಗಾವಿ ಉತ್ತರ ಕ್ಷೇತ್ರ-ಆಸೀಫ್ ಸೇಠ್
ಬೆಳಗಾವಿ ದಕ್ಷಿಣ ಕ್ಷೇತ್ರ-ಪ್ರಭಾವತಿ ಮಾಸ್ತಿ ಮರಡಿ
ತೇರದಾಳ ಕ್ಷೇತ್ರ-ಸಿದ್ದಪ್ಪ ರಾಮಪ್ಪ ಕೊಣ್ಣೂರು
ದೇವರಹಿಪ್ಪರಗಿ-ಶರಣಪ್ಪ ಟಿ.ಸುಣಗಾರ
ಮೂಡಿಗೆರೆ ಕ್ಷೇತ್ರ-ನಯನಾ ಜ್ಯೋತಿ ಜವಾರ್ (ಮೋಟಮ್ಮ ಪುತ್ರಿ)
ಸಿಂದಗಿ ಕ್ಷೇತ್ರ-ಅಶೋಕ ಎಂ.ಮನಗೂಳಿ
ಕಲಬುರಗಿ ಗ್ರಾಮಾಂತರ ಕ್ಷೇತ್ರ-ರೇವೂನಾಯ್ಕ್ ಬೆಳಮಗಿ
ಔರಾದ್ ಕ್ಷೇತ್ರ-ಡಾ.ಶಿಂಧೆ ಭೀಮಸೇನ್ ರಾವ್
ಮಾನ್ವಿ ಕ್ಷೇತ್ರ-ಜಿ.ಹಂಪಯ್ಯ ನಾಯಕ
ದೇವದುರ್ಗ ಕ್ಷೇತ್ರ-ಶ್ರೀದೇವಿ ಆರ್.ನಾಯಕ
ಸಿಂಧನೂರು ಕ್ಷೇತ್ರ-ಹಂಪನಗೌಡ ಬಾದರ್ಲಿ
ಶಿರಹಟ್ಟಿ ಕ್ಷೇತ್ರ-ಸುಜಾತಾ ಎನ್.ದೊಡ್ಮನಿ
ನವಲಗುಂದ ಕ್ಷೇತ್ರ-ಎನ್.ಹೆಚ್.ಕೋನರೆಡ್ಡಿ
ಕುಮಟಾ ಕ್ಷೇತ್ರ-ನಿವೇದಿತ್ ಆಳ್ವಾ
ಸಿರುಗುಪ್ಪ ಕ್ಷೇತ್ರ-ಬಿ.ಎಂ.ನಾಗರಾಜ್
ಬಳ್ಳಾರಿ ನಗರ ಕ್ಷೇತ್ರ-ಭರತ್ ರೆಡ್ಡಿ
ಜಗಳೂರು ಕ್ಷೇತ್ರ-ಬಿ.ದೇವೇಂದ್ರಪ್ಪ
ಹರಪನಹಳ್ಳಿ ಕ್ಷೇತ್ರ-ಎನ್.ಕೊಟ್ರೇಶ್
ಹೊನ್ನಾಳಿ ಕ್ಷೇತ್ರ-ಡಿ.ಜಿ.ಶಾಂತನಗೌಡ
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ-ಡಾ.ಶ್ರೀನಿವಾಸ ಕರಿಯಣ್ಣ
ಶಿವಮೊಗ್ಗ ನಗರ ಕ್ಷೇತ್ರ-ಹೆಚ್.ಸಿ.ಯೋಗೇಶ್
ಶಿಕಾರಿಪುರ ಕ್ಷೇತ್ರ-ಜಿ.ಬಿ.ಮಾಲ್ತೇಶ್
ಕಾರ್ಕಳ ಕ್ಷೇತ್ರ-ಉದಯ್ ಶೆಟ್ಟಿ
ತರೀಕೆರೆ ಕ್ಷೇತ್ರ-ಜಿ.ಹೆಚ್.ಶ್ರೀನಿವಾಸ
ತುಮಕೂರು ಗ್ರಾಮಾಂತರ ಕ್ಷೇತ್ರ-ಜಿ.ಹೆಚ್.ಷಣ್ಮುಖಪ್ಪ ಯಾದವ್
ಚಿಕ್ಕಬಳ್ಳಾಪುರ ಕ್ಷೇತ್ರ-ಪ್ರದೀಪ್ ಈಶ್ವರ್ ಅಯ್ಯರ್
ದಾಸರಹಳ್ಳಿ ಕ್ಷೇತ್ರ-ಧನಂಜಯ ಗಂಗಾಧರಯ್ಯ
ಬೆಂಗಳೂರು ದಕ್ಷಿಣ ಕ್ಷೇತ್ರ-ಆರ್.ಕೆ.ರಮೇಶ್
ಚನ್ನಪಟ್ಟಣ ಕ್ಷೇತ್ರ-ಎಸ್.ಗಂಗಾಧರ್
ಮದ್ದೂರು ಕ್ಷೇತ್ರ-ಕೆ.ಎಂ.ಉದಯ್
ಹಾಸನ ಕ್ಷೇತ್ರ-ಬನವಾಸಿ ರಂಗಸ್ವಾಮಿ
ಮಂಗಳೂರು ನಗರ ದಕ್ಷಿಣ ಕ್ಷೇತ್ರ-ಜಾನ್ ರಿಚರ್ಡ್ ಲೋಬೋ
ಪುತ್ತೂರು ಕ್ಷೇತ್ರ-ಅಶೋಕ್ ಕುಮಾರ್ ರೈ
ಮೈಸೂರಿನ ಕೃಷ್ಣರಾಜ ಕ್ಷೇತ್ರ-ಎಂ.ಕೆ.ಸೋಮಶೇಖರ್
ಮೈಸೂರಿನ ಚಾಮರಾಜ ಕ್ಷೇತ್ರ-ಕೆ.ಹರೀಶ್ ಗೌಡ

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News