Saturday, April 20, 2024
Homeಸುದ್ದಿಬಿಜೆಪಿ ಎರಡನೇ ಪಟ್ಟಿ ಬಿಡುಗಡೆ; ಬೈಂದೂರು ಕ್ಷೇತ್ರಕ್ಕೂ ಹೊಸಮುಖ; ಸುಕುಮಾರ್ ಶೆಟ್ಟಿ ಬದಲು ಗುರುರಾಜ್ ಗಂಟಿ...

ಬಿಜೆಪಿ ಎರಡನೇ ಪಟ್ಟಿ ಬಿಡುಗಡೆ; ಬೈಂದೂರು ಕ್ಷೇತ್ರಕ್ಕೂ ಹೊಸಮುಖ; ಸುಕುಮಾರ್ ಶೆಟ್ಟಿ ಬದಲು ಗುರುರಾಜ್ ಗಂಟಿ ಹೊಳೆಗೆ ಟಿಕೆಟ್

ಉಡುಪಿ, ಏ.13: ಬಿಜೆಪಿಯ ಎರಡನೇ ಪಟ್ಟಿ ಬಿಡುಗಡೆಗಡೆಗೊಂಡಿದ್ದು, ಇದರಲ್ಲಿ ಬೈಂದೂರಿನಿಂದ ಗುರುರಾಜ್ ಗಂಟಿಹೊಳೆ ಗೆ ಟಿಕೆಟ್ ನೀಡಲಾಗಿದೆ.

ಹಾಲಿ ಶಾಸಕ ಸುಕುಮಾರ್ ಶೆಟ್ಟ‌ರಿಗೆ ಬಿಜೆಪಿ ಕೊಕ್ ನೀಡಿದೆ. ಆ ಮೂಲಕ ಉಡುಪಿ ಜಿಲ್ಲೆಯ ಎಲ್ಲಾ ಐದು ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದಂತಾಗಿದೆ.

ಕಾರ್ಕಳದ ಸುನಿಲ್ ಕುಮಾರ್ ಹೊರತುಪಡಿಸಿ ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಬಿಜೆಪಿ ಮಣೆ ಹಾಕಿದೆ.

ಯಾವ ಕ್ಷೇತ್ರಕ್ಕೆ ಯಾರು ವಿವರ ಇಲ್ಲಿದೆ

ದೇವರಹಿಪ್ಪರಗಿ-ಸೋಮನಗೌಡ ಪಾಟೀಲ್
ಬಸವನಬಾಗೇವಾಡಿ -ಎಸ್ .ಕೆ.ಬೆಳ್ಳುಬ್ಬಿ
ಇಂಡಿ-ಕಾಸಗೌಡ ಬಿರಾದಾರ್
ಗುರುಮಿಠಕಲ್-ಲಲಿತ ಅನಪೂರ್
ಬೀದರ್-ಈಶ್ವರ್ ಸಿಂಗ್ ಠಾಕೂರ್
ಭಾಲ್ಕಿ -ಪ್ರಕಾಶ್ ಖಂಡ್ರೆ
ಗಂಗಾವತಿ -ಪರಣ್ಣ ಮುನವಳ್ಳಿ
ಕಲಘಟಗಿ-ನಾಗರಾಜ್ ಛಬ್ಬಿ(ಕೆಲ ದಿನದ ಹಿಂದಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು, ನಿಂಬಣ್ಣ ನವರ್ ಅವರಿಗೆ ಕೈತಪ್ಪಿದ ಟಿಕೆಟ್)
ಹಾನಗಲ್-ಶಿವರಾಜ್ ಸಜ್ಜನರ್
ಹಾವೇರಿ -ಗವಿಸಿದ್ದಪ್ಪ ದ್ಯಾಮಣ್ಣ ನವರ್(ನೆಹರೂ ಓಲೇಕಾರ್ ಅವರಿಗೆ ಕೈತಪ್ಪಿದ ಟಿಕೆಟ್)
ಹರಪನಹಳ್ಳಿ-ಕರುಣಾಕರ ರೆಡ್ಡಿ
ದಾವಣಗೆರೆ ಉತ್ತರ-ಲೋಕೀಕೆರೆ ನಾಗರಾಜ್(ರವೀಂದ್ರ ನಾಥ್ ಅವರಿಗೆ ಕೈತಪ್ಪಿದ ಟಿಕೆಟ್)
ದಾವಣಗೆರೆ ದಕ್ಷಿಣ-ಅಜಯ್ ಕುಮಾರ್
ಮಾಯಕೊಂಡ -ಬಸವರಾಜ್ ನಾಯ್ಕ್(ಲಿಂಗಣ್ಣ ನಾಯಕ್ ಅವರಿಗೆ ಕೈತಪ್ಪಿದ ಟಿಕೆಟ್)
ಚನ್ನಗಿರಿ-ಶಿವಕುಮಾರ್(ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಕೈತಪ್ಪಿದ ಟಿಕೆಟ್)
ಬೈಂದೂರು -ಗುರುರಾಜ್ ಗಂಟಿಹೊಳೆ(ಹಾಲಿ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಅವರಿಗೆ ಕೈತಪ್ಪಿದ ಟಿಕೆಟ್)
ಮೂಡಿಗೆರೆ-ದೀಪಕ್ ದೊಡ್ಡಯ್ಯ(ಹಾಲಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಕೈತಪ್ಪಿದ ಟಿಕೆಟ್)
ಗುಬ್ಬಿ -ಎಸ್.ಡಿ.ದಿಲೀಪ್ ಕುಮಾರ್ ಶಿಡ್ಲಘಟ್ಟ- ರಾಮಚಂದ್ರ ಗೌಡ
ಕೆಜಿಎಫ್ -ಅಶ್ವಿನಿ ಸಂಪಂಗಿ
ಶ್ರವಣಬೆಳಗೊಳ -ಚಿದಾನಂದ
ಅರಸೀಕೆರೆ-ಜಿ.ಬಿ.ಬಸವರಾಜು
ಹೆಗ್ಗಡದೇವನಕೋಟೆ-ಕೃಷ್ಣ ನಾಯ್ಕ್

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News