ಬಂಡೀಪುರ ಅರಣ್ಯಕ್ಕೆ ತಲುಪಿದ ನಮೋ; ವಿಶೇಷ ದಿರಿಸಿನಲ್ಲಿ ಸಫಾರಿ ಹೊರಟ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು ಹುಲಿ ಯೋಜನೆಯ 50ನೇ ವರ್ಷಾಚರಣೆಯಲ್ಲಿ ಭಾಗವಹಿಸಲು ಬಂಡೀಪುರಕ್ಕೆ ಆಗಮಿಸಿದ್ದಾರೆ.

ನಿನ್ನೆ ಸಂಜೆ ಮೈಸೂರಿಗೆ ಬಂದಿಳಿದ ಅವರು ಇಂದು ಬೆಳಗ್ಗೆ ಅಲ್ಲಿಂದ ಹೊರಟು ಮೇಲುಕಾಮಹಳ್ಳಿಯ ಸಫಾರಿ ಕೇಂದ್ರದ ಬಳಿ ನಿರ್ಮಿಸಿರುವ ತಾತ್ಕಾಲಿಕ ಹೆಲಿಪ್ಯಾಡ್‌ನಲ್ಲಿ ಬಂದಿಳಿದರು.

ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಬಂಡೀಪುರ ಕ್ಯಾಂಪಸ್‌ಗೆ ತೆರಳಿದ ಅವರು, ವಿಶೇಷ ಬಟ್ಟೆಯನ್ನು ಧರಿಸಿ ಸಫಾರಿಗೆ ಹೊರಟರು.

You cannot copy content from Baravanige News

Scroll to Top