Saturday, July 27, 2024
Homeಸುದ್ದಿಬೈಂದೂರು: ವಿಷ ಸೇವಿಸಿ ವ್ಯಕ್ತಿ ಮೃತ್ಯು

ಬೈಂದೂರು: ವಿಷ ಸೇವಿಸಿ ವ್ಯಕ್ತಿ ಮೃತ್ಯು

ಬೈಂದೂರು ಎ.4: ಆಕಸ್ಮಿಕವಾಗಿ ಇಲಿ ಪಷಾಣ ಕುಡಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಶೀರೂರು ಗ್ರಾಮದಲ್ಲಿ ನಡೆದಿದೆ.

ಸ್ಥಳೀಯ ನಿವಾಸಿ ಸುರೇಶ್ ಮೇಸ್ತ ( 46 ) ಮೃತಪಟ್ಟವರು.

ಇವರು ವಿವಾಹವಾಗಿ 10 ವರ್ಷ ಕಳೆದರೂ ಮಕ್ಕಳಾಗದೇ ಇರುವ  ಕಾರಣ ಚಿಂತೆಯಿಂದ  ಮದ್ಯಪಾನ ಮಾಡುವ ಅಭ್ಯಾಸವನ್ನು  ಹೊಂದಿದ್ದು, ಮಾ. 31 ರಂದು ಮನೆಯಲ್ಲಿ ಇಲಿಗೆ ಹಾಕಲು ತಂದು ಇರಿಸಿದ್ದ ಮದ್ದನ್ನು ಆಕಸ್ಮಿಕವಾಗಿ ಕುಡಿದು ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಅವರ  ಹೆಂಡತಿ  ಉಷಾ ರವರು  ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದು, ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ತಂಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News