Saturday, July 27, 2024
Homeಸುದ್ದಿಕಾರ್ಕಳ: ಅನಾರೋಗ್ಯದಿಂದ ಮಗ ಸಾವು; ಮನನೊಂದು ತಾಯಿ ಆತ್ಮಹತ್ಯೆ

ಕಾರ್ಕಳ: ಅನಾರೋಗ್ಯದಿಂದ ಮಗ ಸಾವು; ಮನನೊಂದು ತಾಯಿ ಆತ್ಮಹತ್ಯೆ

ಕಾರ್ಕಳ, ಮಾ 28 : ಮಗನನ್ನು ಕಳೆದುಕೊಂಡ ನೋವಿನಲ್ಲಿ ತಾಯಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದ ಬಂಗ್ಲೆಗುಡ್ಡೆಯಲ್ಲಿ ಮಾ.28ರಂದು ನಡೆದಿದೆ.

ರತ್ನಾವತಿ ನಾಯಕ್ (85) ಆತ್ಮಹತ್ಯೆ ಮಾಡಿಕೊಂಡವರು.

ಇವರ ಕಿರಿಯ ಮಗ ಮಾ.26 ರಂದು ಸಂಜೆ ವೇಳೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಇದೇ ನೋವಿನಿಂದ ರತ್ನಾವತಿ ನಾಯಕ್ ಅವರು ಮನೆಯ ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಿರಿಮಗ ಚಂದ್ರಶೇಖರ್ ನಾಯಕ್ ನೀಡಿದ ದೂರಿನಂತೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News