Monday, May 6, 2024
Homeಸುದ್ದಿಕರಾವಳಿಮಳಲಿ ಮಸೀದಿ ವಿವಾದ ಮತ್ತೆ ಮುನ್ನೆಲೆಗೆ: ದೇವರ ಅನುಗ್ರಹಕ್ಕಾಗಿ ಹೋಮ ನೆರವೇರಿಸಿದ ವಿ.ಹೆಚ್.ಪಿ

ಮಳಲಿ ಮಸೀದಿ ವಿವಾದ ಮತ್ತೆ ಮುನ್ನೆಲೆಗೆ: ದೇವರ ಅನುಗ್ರಹಕ್ಕಾಗಿ ಹೋಮ ನೆರವೇರಿಸಿದ ವಿ.ಹೆಚ್.ಪಿ

ಮಂಗಳೂರು: ಮಳಲಿ ಮಸೀದಿ ವಿವಾದ ಪ್ರಕರಣ ಸಂಬಂಧಿಸಿದಂತೆ ದರ್ಗಾವಿದ್ದ ಜಾಗದಲ್ಲಿ ಮಂದಿರವಿತ್ತು ಎಂಬ ವಿಚಾರಕ್ಕೆ ಸಂಬಂಧಿಸಿ ಇಂದು ವಿಶ್ವ ಹಿಂದೂ ಪರಿಷತ್ ಮಹಾ ಗಣಯಾಗ ನೆರವೇರಿಸಿದೆ.

ಮಂದಿರ ನಿರ್ಮಾಣಕ್ಕೆ ಗಣಪತಿ ಹೋಮ ಮಾಡುವ ಮೂಲಕ ಸಂಕಲ್ಪ ಮಾಡಿದ್ದಾರೆ.

ದರ್ಗಾವಿದ್ದ ಜಾಗದಲ್ಲಿ ತಂತ್ರಿಗಳು ಈ ಹಿಂದೆ ತಾಂಬೂಲ ಪ್ರಶ್ನೆ ನಡೆಸಿದ್ದರು. ತಾಂಬೂಲ ಪ್ರಶ್ನೆಯಲ್ಲಿ ದೇವಾಲಯ ನಿರ್ಮಾಣಕ್ಕೆ ದೇವರ ಅನುಗ್ರಹ ಬೇಕೆಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡರು 108 ಕಾಯಿಯ ಮಹಾ ಗಣಯಾಗ ನೆರವೇರಿಸಿದ್ದಾರೆ.





ವಿಹೆಚ್ಪಿ ಮಳಲಿಯ ರಾಮಾಂಜನೇಯ ಭಜನಾ ಮಂದಿರದಲ್ಲಿ ಮಹಾ ಗಣಯಾಗ ನೆರವೇರಿಸಿದೆ. ಈ ಮಹಾ ಗಣಯಾಗದಲ್ಲಿ ಮಂಗಳೂರು ಉತ್ತರ ಶಾಸಕ ಡಾ ಭರತ್ ಶೆಟ್ಟಿ ಭಾಗಿಯಾಗಿದ್ದರು.



ಏನಿದು ಮಳಲಿ ಮಸೀದಿ ವಿವಾದ ಪ್ರಕರಣ..!??

ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಮಳಲಿಯಲ್ಲಿ ಮಸೀದಿಯನ್ನು ನವೀಕರಣಕ್ಕೆಂದು ಕೆಡವಿದಾಗ ಹಿಂದೂ ದೇಗುಲ ಹೋಲುವಂತಹ ಆಕೃತಿಯ ವಾಸ್ತುಶಿಲ್ಪದ ಕಟ್ಟಡ ಪತ್ತೆಯಾಗಿತ್ತು. ಬಳಿಕ ಈ ವಿಚಾರ ಬೆಳಕಿಗೆ ಬಂದಂತೆ ಕೋರ್ಟ್ ಮೊರೆಹೋಯಿತು.

ಮಳಲಿ ಬಳಿ ಅಸಯ್ಯಿದ್ ಅಬ್ದುಲ್ಲಾ ಹಿಲ್ ಮದನಿ ದರ್ಗಾವನ್ನು ನವೀಕರಣಕ್ಕಾಗಿ ಕೆಡವಿದಾಗ ಹಿಂದೂ ದೇಗುಲ ಹೋಲುವ ಆಕೃತಿಯ ವಾಸ್ತುಶಿಲ್ಪದ ಕಟ್ಟಡ ಪತ್ತೆಯಾಗಿತ್ತು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News