ಕಾಪು: ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಕಂದಾಯ ಇಲಾಖೆಗೆ ಸೇರಿದ ಭೂಮಿ ಒತ್ತುವರಿ ಮಾಡುವ ಸಲುವಾಗಿ ಬಡ ದಲಿತ ಮಹಿಳೆಯ ಮನೆಯನ್ನು ಧ್ವಂಸ ಮಾಡಿರುವ ವಿರುದ್ಧ ಕಾಂಗ್ರೇಸ್ ಇಂದು ಶಿರ್ವ ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಯಿತು, ಈ ಸಂಧರ್ಭದಲ್ಲಿ ತಲ್ಲಾಟ ನೂಕಾಟದಿಂದ ವಿನಯ್ ಕುಮಾರ್ ಸೊರಕೆಯವ ಬಟ್ಟೆ ಹರಿದಿದ್ದನ್ನು ಕಾಪುವಿನ ಶಾಸಕ ಲಾಲಾಜಿ ಮೆಂಡನ್ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
![](https://i0.wp.com/wordpress-885334-3069229.cloudwaysapps.com/wp-content/uploads/2022/04/Soraketwt-optimized.jpg?resize=593%2C710&ssl=1)
ಟ್ವೀಟ್ನಲ್ಲಿ ”ತನ್ನ ಪಕ್ಷದ ಆಡಳಿತವಿರುವ ಗ್ರಾಮ ಪಂಚಾಯತ್ ಕ್ರಮದ ವಿರುದ್ಧ ಪ್ರತಿಭಟನೆಗೆ ಕೂತ ಮಾಜಿ ಸಚಿವ ಹಳೆ ಅಂಗಿ ಹಾಕಿ ತನ್ನವರಿಂದಲೇ ಹರಿಸಿಕೊಂಡು ಪೌರುಷ ತೋರಿಸಿದ ವಿನಯ ಕುಮಾರ್ ಸೊರಕೆ” ಎಂದು ಬರೆದುಕೊಂಡಿದ್ದಾರೆ.