Friday, April 19, 2024
Homeಸುದ್ದಿಕರಾವಳಿಬೈಂದೂರು: ಮಸೀದಿಗೆ ಪ್ರಾರ್ಥನೆಗೆಂದು ತೆರಳಿದ್ದ ವ್ಯಕ್ತಿ ನಾಪತ್ತೆ..!

ಬೈಂದೂರು: ಮಸೀದಿಗೆ ಪ್ರಾರ್ಥನೆಗೆಂದು ತೆರಳಿದ್ದ ವ್ಯಕ್ತಿ ನಾಪತ್ತೆ..!

ಬೈಂದೂರು: ಮಸೀದಿಗೆ ಪ್ರಾರ್ಥನೆಗೆಂದು ಹೋಗಿದ್ದ ಯಡ್ತರೆ ಗ್ರಾಮದ ವ್ಯಕ್ತಿ ವಾಪಸ್ಸು ಮನೆಗೆ ಬಾರದೆ ನಾಪತ್ತೆಯಾಗಿರುವ ಬಗ್ಗೆ ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಬೈಂದೂರಿನ ಯಡ್ತರೆ ಗ್ರಾಮದ ಮಹಮ್ಮದ್ ಹಬಿಬೀ ಮಹಮ್ಮದ್ ಮುವಾಜ್ (35) ನಾಪತ್ತೆಯಾಗಿರುವವರು.

ಇವರು ಫೆ.28 ರಂದು ಬೆಳಿಗ್ಗೆ 5:00 ಗಂಟೆಗೆ ಎದ್ದು ಎಂದಿನಂತೆ ಮಸೀದಿಗೆ ಪ್ರಾರ್ಥನೆಗೆ ಹೋಗಿದ್ದರು. ಆದರೆ ಪ್ರಾರ್ಥನೆ ಮುಗಿಸಿ ವಾಪಾಸ್ಸು ಮನೆಗೆ ಬಂದಿರುವುದಿಲ್ಲ. ಇದನ್ನು ಕಂಡು ಮಹಮ್ಮದ್ ಹಬಿಬೀ ಮಹಮ್ಮದ್ ಮುವಾಜ್ ಅವರ ತಮ್ಮ ಎಂ.ಎಚ್ ಮಾಜೀನ್ ಅವರು ಮಸೀದಿಗೆ ಕರೆ ಮಾಡಿ ವಿಚಾರಿಸಿದ್ದರು. ಆದರೆ ಅಲ್ಲಿ ಅವರು ಪ್ರಾರ್ಥನೆಗೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ ಅವರ ಮೊಬೈಲ್ ಸಂಖ್ಯೆಗೆ ಬೆಳಿಗ್ಗೆ 7:30ಕ್ಕೆ ಕರೆ ಮಾಡಿದಾಗ ಮೂರು ಬಾರಿ ರಿಂಗ್ ಆಗಿ, ಕರೆಯನ್ನು ಸ್ವೀಕರಿಸಿರುವುದಿಲ್ಲ. ನಂತರ ಕರೆ ಮಾಡಿದಾಗ ಸ್ವಿಚ್ ಆಪ್ ಆಗಿರುತ್ತದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಹಾಗೂ ಈ ಬಗ್ಗೆ ಸಂಬಂಧಿಕರ ಮನೆಗೆ ಹಾಗೂ ಸ್ನೇಹಿತರ ಮನೆಗೆ ಹೋಗಿ, ಪೋನ್ ಮಾಡಿ ಹುಡುಕಾಡಿದರೂ ಈತನಕ ವಾಪಾಸ್ಸು ಮನೆಗೆ ಬಾರದೇ ಕಾಣಿಯಾಗಿರುವುದಾಗಿ ಎಂ.ಎಚ್ ಮಾಜೀನ್ ಅವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News