Thursday, March 28, 2024
Homeಸುದ್ದಿಭೂತಕೋಲ ಹಿಂದೂಗಳದ್ದಲ್ಲ : ನಟ ಚೇತನ್ ಸಮರ್ಥನೆ

ಭೂತಕೋಲ ಹಿಂದೂಗಳದ್ದಲ್ಲ : ನಟ ಚೇತನ್ ಸಮರ್ಥನೆ

ಬೆಂಗಳೂರು ಅ.19 : ಭೂತಕೋಲ ಹಿಂದೂಗಳದ್ದಲ್ಲ ಎಂಬ ನಟ ಚೇತನ್ ಹೇಳಿಕೆಯನ್ನು ಅವರು ಮತ್ತೆ ಸಮರ್ಥಿಸಿಕೊಂಡಿದ್ದಾರೆ.

ಭೂತಕೋಲ ಆಚರಣೆ ಹಿಂದೂ ಸಂಸ್ಕೃತಿಯ ಭಾಗವೇ ಆಗಿದೆ ಎಂಬ ನಟ ರಿಷಬ್ ಶೆಟ್ಟಿ ಅವರ ಹೇಳಿಕೆಯನ್ನು ಅಲ್ಲಗಳೆದಿರುವ ನಟ ಚೇತನ್ ಸುದ್ದಿಗೋಷ್ಠಿ ಕರೆದು ಮಾತನಾಡಿ, ಹಿಂದಿ ಹೇರಿಕೆ ಹೇಗೆ ಒಪ್ಪೋಕೆ ಆಗೋದಿಲ್ಲೋ ಅದೇ ರೀತಿ ಹಿಂದುತ್ವ ಹೇರಿಕೆಯನ್ನು ಒಪ್ಪೋಕೆ ಆಗೋದಿಲ್ಲ.

ಧರ್ಮ ಹಾಗೂ ಜಾತಿಗಳಲ್ಲಿ ವಿವಿಧತೆ ಇದೆ. ಹಿಂದೂ ಬೇರೆ, ಹಿಂದುತ್ವವೇ ಬೇರೆ. ಭೂತಕೋಲ ಮೂಲ ನಿವಾಸಿಗಳ ಆಚರಣೆ. ಕೇವಲ ಹಿಂದು ಧರ್ಮದ್ದಲ್ಲ. ಎಲ್ಲಾ ಆಚರಣೆಗಳನ್ನು ಗೌರವಿಸಿ ಎಂದು ಹೇಳಿದ್ದಾರೆ.

ಕಾಂತಾರ ಸಿನಿಮಾ ಭರ್ಜರಿ ಯಶಸ್ಸು ಗಳಿಸಿದ್ದು, ದೇಶವೇ ಇತ್ತ ತಿರುಗಿ ನೋಡುವಂತೆ ಮಾಡಿದೆ. ಈ ಸಿನಿಮಾಗೆ ಎಲ್ಲಿಯೂ ಮಿಶ್ರ ಪ್ರತಿಕ್ರಿಯೆ ಕೂಡ ಎದುರಾಗಿಲ್ಲ. ಪ್ರತಿಯೊಬ್ಬರೂ ಸಿನಿಮಾ ನೋಡಿ ಮೆಚ್ಚಿದ್ದಾರೆ. ರಿಷಭ್ ಶೆಟ್ಟಿ ಹೇಳಿಕೆಯನ್ನು ಒಪ್ಪದ ಚೇತನ್ ಇದೀಗ ಪರ ವಿರೋಧ ಚರ್ಚೆಗೆ ವೇದಿಕೆ ಮಾಡಿಕೊಟ್ಟಿದ್ದು, ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News