Friday, March 29, 2024
Homeಸುದ್ದಿಸಂಘಪರಿವಾರದ ಕಾರ್ಯಕರ್ತನಿಗೆ ಹಲ್ಲೆ - ವೈಯ್ಯಕ್ತಿಕ ಜಗಳಕ್ಕೆ ಕೋಮು ಸ್ವರೂಪ ನೀಡಿ ಶಾಂತಿ ಕದಡಲು ಪ್ರಯತ್ನ!

ಸಂಘಪರಿವಾರದ ಕಾರ್ಯಕರ್ತನಿಗೆ ಹಲ್ಲೆ – ವೈಯ್ಯಕ್ತಿಕ ಜಗಳಕ್ಕೆ ಕೋಮು ಸ್ವರೂಪ ನೀಡಿ ಶಾಂತಿ ಕದಡಲು ಪ್ರಯತ್ನ!

ಭಟ್ಕಳ: ಚಿಟ್ಟಿಹಕ್ಕಲು ಕ್ರಾಸ್ ಬಳಿ ಸಂಘಪರಿವಾರದ ಕಾರ್ಯಕರ್ತನೊಬ್ಬನ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಇದೀಗ ತನ್ನ ಸ್ನೇಹಿತನಿಂದಲೇ ಹಲ್ಲೆಗೊಳಗಾದ ಸಂಘಪರಿವಾರದ ಕಾರ್ಯಕರ್ತನೊಬ್ಬ ಸತ್ಯ ಮರೆಮಾಚಿ ಅನ್ಯಧರ್ಮಿಯರಿಂದ ಹಲ್ಲೆ ಎಂದು ಸುಳ್ಳು ದೂರು ನೀಡಿ ಕೋಮು ಸಾಮರಸ್ಯ ಕದಡಲು ಯತ್ನಿಸಿದ್ದು ಬೆಳಕಿಗೆ ಬಂದಿದೆ.

ಸ್ನೇಹಿತರಾದ ಸೋಮಯ್ಯ ನಾಯ್ಕ ಎಂಬವರ ಪುತ್ರ ನವೀನ ಮತ್ತು ವೆಂಕಟೇಶ ನಾಯ್ಕ ಎಂಬವರ ಪುತ್ರ ನವೀನನ ನಡುವೆ ಅ.8ರಂದು ವೈಯಕ್ತಿಕ ವಿಷಯಕ್ಕೆ ಜಗಳ ನಡೆದಿದ್ದು, ಘಟನೆಯಲ್ಲಿ ಸೋಮಯ್ಯ ನಾಯ್ಕ ಎಂಬವರ ಪುತ್ರ ನವೀನ್ ಗೆ ಗಾಯಗಳಾಗಿವೆ. ಆದರೆ ವೈಯಕ್ತಿಕ ಕಾರಣಗಳಿಗೆ ಸ್ನೇಹತನಿಂದಲೇ ಹಲ್ಲೆಗೊಳಗಾಗಿದ್ದನ್ನು ಮರೆಮಾಚಿ ಕೋಮು ಸ್ವರೂಪದ ಘಟನೆಯನ್ನಾಗಿಸುವ ಉದ್ದೇಶದಿಂದ ಸುಳ್ಳು ಮಾಹಿತಿಯನ್ನು ಪೊಲೀಸರಿಗೆ ನೀಡಿ ಪ್ರಕರಣ ದಾಖಲಿದ್ದಲ್ಲದೆ, ಅನ್ಯ ಧರ್ಮದ ವ್ಯಕ್ತಿಗಳು ಪ್ರಕರಣದ ಆರೋಪಿಗಳು ಎಂದು ಬಿಂಬಿಸಿ ಸಮಾಜದಲ್ಲಿ ಶಾಂತಿ ಕದಡುವ ಬಗ್ಗೆ ಯೋಜನೆ ರೂಪಿಸಿದ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅ. 08 ರಂದು ರಾತ್ರಿ ಮಾವಿನಕಟ್ಟಾ ಕಡೆಯಿಂದ ಮುರ್ಡೇಶ್ವರದ ಕುಂಬಾರಕೇರಿಯಲ್ಲಿರುವ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಚಿಟ್ಟಿಹಕ್ಕಲು ಕ್ರಾಸ್ ಬಳಿ ದ್ವಿಚಕ್ರ ವಾಹನದಲ್ಲಿ ಬಂದ ಮೂವರು ತನಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಅವರು ಅನ್ಯ ಧರ್ಮಕ್ಕೆ ಸೇರಿದವರು ಎಂದು ಆರೋಪಿಸಿ ಸೋಮಯ್ಯ ನಾಯ್ಕ ಎಂಬವರ ಪುತ್ರ ಸಂಘಪರಿವಾರ ಸಂಘಟನೆಯ ಕಾರ್ಯಕರ್ತ ನವೀನ ಎಂಬವರು ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸ್ನೇಹಿತರಾದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News