Saturday, April 27, 2024
Homeಸುದ್ದಿತುಮಕೂರು ಕುಚ್ಚಂಗಿಯಲ್ಲಿ 3 ಮೃತದೇಹ ಸಿಕ್ಕ ಕೇಸ್; 8 ಆರೋಪಿಗಳನ್ನು ಬಂಧಿಸಿದ ಪೊಲೀಸರು

ತುಮಕೂರು ಕುಚ್ಚಂಗಿಯಲ್ಲಿ 3 ಮೃತದೇಹ ಸಿಕ್ಕ ಕೇಸ್; 8 ಆರೋಪಿಗಳನ್ನು ಬಂಧಿಸಿದ ಪೊಲೀಸರು

ತುಮಕೂರು: ಕುಚ್ಚಂಗಿ ಕೆರೆ ಬಳಿ ಸುಟ್ಟ ಕಾರಿನಲ್ಲಿ ಮೂವರ ಮೃತದೇಹ ಪತ್ತೆಯಾದ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು 8 ಆರೋಪಿಗಳನ್ನು ಬಂಧಿಸಿದ್ದಾರೆ.

ಪಾತರಾಜು ಅಲಿಯಾಸ್ ಸ್ವಾಮಿ (35), ಗಂಗರಾಜು (35), ಮಧುಸೂದನ್ (24), ನವೀನ್ (24), ಕೃಷ್ಣ (22), ಗಣೇಶ್ (19), ಕಿರಣ್ (23), ಸೈಮನ್ (18), ಬಂಧಿತ ಆರೋಪಿಗಳು.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಬಳಿಯ ಇಸಾಕ್, ಶಾಹುಲ್, ಸಿದ್ದಿಕ್ ಮೃತ ಕೊಲೆಯಾದ ದುರ್ದೈವಿಗಳು.

ಚಿನ್ನದ ಆಸೆಗೆ ಬಿದ್ದು ಮೂವರು ಮಾರ್ಚ್​ 21 ರಂದು ಕೊಲೆಯಾಗಿದ್ದರು. ನಿಧಿ ಹುಡುಕಿ ಕೊಡುವುದಾಗಿ ಮುಂಗಡವಾಗಿ ಹಣ ಪಡೆದಿದ್ದ ಪ್ರಮುಖ ಆರೋಪಿಗಳಾದ ಪಾತರಾಜು ಅಲಿಯಾಸ್ ಸ್ವಾಮಿ, 6 ತಿಂಗಳ ಹಿಂದೆ ಮೃತರ ಬಳಿ ಅಡ್ವಾನ್ಸ್ ಪಡೆದಿದ್ದ ಎನ್ನಲಾಗಿದೆ.

ತಿಂಗಳ ಕಳೆದರೂ ನಿಧಿ ಹುಡುಕಿ ಕೊಡಲು ಪಾತರಾಜು ಸ್ವಾಮಿ ಸತಾಯಿಸುತ್ತಿದ್ದ. ಹಲವು ಬಾರಿ ಕರೆ ಮಾಡಿದ್ರು ಕರೆ ಸ್ವೀಕರಿಸದೇ ಕಳ್ಳಾಟ ನಡೆಸಿದ್ದ. ಈ ವೇಳೆ ನಮಗೆ ನಿಧಿ ಹುಡುಕಿ ಕೊಡಿ ಇಲ್ಲ ನಮ್ಮ ಹಣ ನಮಗೆ ವಾಪಸ್ ಕೊಡಿ. ಇಲ್ಲದಿದ್ದರೆ ಪೊಲೀಸರಿಗೆ ದೂರು ನೀಡೋದಾಗಿ ಮೃತರು ಹೇಳಿದ್ದರು.

ಹಣ ವಾಪಸ್ ಕೊಡಲು ಆಗದೇ ಕೊಲೆ ಮಾಡಲು ಸ್ಕೇಚ್ ಹಾಕಿ, ಪ್ಲಾನ್​ ಅಂತೆಯೇ ಕೊಲೆ ಮಾಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News