Thursday, March 28, 2024
Homeಸುದ್ದಿಕಾರ್ಕಳ: ಕೋವಿಡ್ ಲಸಿಕೆಯ ನೋವು, ಮನನೊಂದ ಯುವಕ ಆತ್ಮಹತ್ಯೆಗೆ ಶರಣು!

ಕಾರ್ಕಳ: ಕೋವಿಡ್ ಲಸಿಕೆಯ ನೋವು, ಮನನೊಂದ ಯುವಕ ಆತ್ಮಹತ್ಯೆಗೆ ಶರಣು!

ಕಾರ್ಕಳ: ಕೊರೊನಾ ಲಸಿಕೆ ಪಡೆದು ಕೈನೋವುಂಟಾದ ಪರಿಣಾಮ ಕೆಲಸಕ್ಕೆ ಹೋಗದೆ ಮನನೊಂದ ಯುವಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಕೌಡೂರು ಗ್ರಾಮದಲ್ಲಿ ನಡೆದಿದೆ.ಕೌಡೂರು ಗ್ರಾಮದ 37ವರ್ಷದ ಪ್ರದೀಪ್ ಪೂಜಾರಿ ಆತ್ಮಹತ್ಯೆ ಮಾಡಿಕೊಂಡ ಯುವಕ.

ಇವರು ಸುಮಾರು 10 ವರ್ಷಗಳಿಂದ ಮುಂಬೈ ಹಾಗೂ ಪೂನಾದಲ್ಲಿ ಕೆಲಸ ಮಾಡಿಕೊಂಡಿದ್ದರು. ಕಳೆದ ಒಂದು ವರ್ಷದಿಂದ ಊರಿಗೆ ಬಂದು ನೆಲೆಸಿದ್ದರು. ಇವರು ಕೊರೊನಾ ಲಸಿಕೆ ಪಡೆದಿದ್ದು, ಇದರಿಂದ ಕೈನೋವುಂಟಾಗಿ ಸರಿಯಾಗಿ ಕೆಲಸ ಮಾಡಲು ಆಗುತ್ತಿರಲಿಲ್ಲ. ಇದೇ ಖಿನ್ನತೆಯಲ್ಲಿ ಮನನೊಂದು ಮನೆಯ ಪಕ್ಕದಲ್ಲಿರುವ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News