ಶಿರ್ವ: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ, ಶಿರ್ವ ಇವರ ವತಿಯಿಂದ ಪ್ರಥಮ ಬಾರಿಗೆ ಶಿರ್ವದಲ್ಲಿ ಶ್ರೀ ಶಾರದ ಮಹೋತ್ಸವ, ಮಹಾ ಅನ್ನಸಂತರ್ಪಣೆ ಹಾಗೂ ವೈಭವದ ಶೋಭಾಯಾತ್ರೆ ಜರುಗಿತು.
ಈ ಬಾರಿಯ ಶಾರದಾ ಮಾತೆಯ ಮೆರವಣಿಗೆಯ ಜೊತೆಗೆ ಸ್ತಬ್ದಚಿತ್ರಗಳು ಸಾಗಿ ಬಂದವು. ಚೆಂಡೆ, ವಾದ್ಯ, ವೈವಿಧ್ಯ ಸ್ತಬ್ಧಚಿತ್ರಗಳು, ಜಾನಪದ ಕಲಾ ತಂಡಗಳು, ನಾಸಿಕ್ ಬ್ಯಾಂಡ್, ಭಜನೆ ಸೇರಿದಂತೆ ವಿವಿಧ ಕಲಾ ಪ್ರಾಕಾರಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿದವು.
![](https://i0.wp.com/wordpress-885334-3069229.cloudwaysapps.com/wp-content/uploads/2022/10/4-optimized.jpeg?resize=696%2C928&ssl=1)
ಸಮಿತಿಯ ಅಧ್ಯಕ್ಷರಾದ ಶ್ರೀ ಹರಿಪ್ರಸಾದ್ ಸಾಲ್ಯಾನ್ ನೇತೃತ್ವದಲ್ಲಿ ನಡೆದ ಪ್ರಥಮ ವರ್ಷದ ಶಾರದೋತ್ಸವದ ಪೂಜಾ ಸೇವೆಯು ವೇ| ಮೂ| ಕುತ್ಯಾರು ಶ್ರೀ ಶ್ರೀಧರ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.
![](https://i0.wp.com/wordpress-885334-3069229.cloudwaysapps.com/wp-content/uploads/2022/10/3-optimized.jpeg?resize=696%2C806&ssl=1)
ಲಕ್ಕಿಡಿಪ್ ಫಲಿತಾಂಶ
ಸಾರ್ವಜನಿಕ ಶ್ರೀ ಶಾರದೋತ್ಸವ ಸೇವಾ ಸಮಿತಿ ಶಿರ್ವ, ಇವರ ವತಿಯಿಂದ ನಡೆದ ಲಕ್ಕಿ ಡೀಪ್ ಡ್ರಾದ ಪಲಿತಾಂಶ
1) ಪ್ರಥಮ ಬಹುಮಾನ- ನಂ.36
2) ಏರಡನೇ ಬಹುಮನ .. ನಂ.308
3 )ಮೂರನೇ ಬಹುಮಾನ-ನಂ.760
ಮೂರು ಸಮಾದಾನಕರ ಬಹುಮಾನಗಳು
1) ನಂ.862
2) ನಂ.427
3) ನಂ.339
ಶಾರದ ಮಾತೆಯ ಜಲಸ್ಥಂಭ ನವು ಕೋಡು ಬ್ರಹ್ಮ ಸ್ಥಾನದ ಬ್ರಹ್ಮರ ಕೆರೆಯಲ್ಲಿ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ನಡೆಯಿತು.