ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಇಳಿಯುವ ವೇಳೆ ಜಾರಿಬಿದ್ದ ಯುವಕ; ಗಂಭೀರ ಗಾಯ…!!

ಉಡುಪಿ, ಡಿ. 11: ಉಡುಪಿಯಿಂದ ಗೋವಾದ ಕಡೆಗೆ ಹೋಗುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಜಾರಿಬಿದ್ದು ಯುವಕನೊಬ್ಬ ಗಂಭೀರ ಸ್ವರೂಪದಲ್ಲಿ ಗಾಯಗೊಂಡ ಘಟನೆ ಬೀಜೂರು ಎಂಬಲ್ಲಿ ಸಂಭವಿಸಿದೆ.

ರೈಲ್ವೆ ಇಲಾಖೆಯಿಂದ ಕರೆ ಬಂದ ಮಾಹಿತಿ ಅನ್ವಯ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿದಾಗ ಯುವಕನೊಬ್ಬ ಗಂಭೀರ ರೀತಿಯಲ್ಲಿ ಗಾಯಗೊಂಡು ಸ್ಥಳದಲ್ಲಿ ಬಿದ್ದುಕೊಂಡಿದ್ದನು.

ಗಾಯಾಳುವನ್ನು ಸುಖೇಶ್ (35) ಎಂದು ಗುರುತಿಸಲಾಗಿದೆ.

ಚಲಿಸುತ್ತಿದ್ದ ರೈಲಿನಿಂದ ಇಳಿಯುವ ಆತುರದಲ್ಲಿ ನಿಯಂತ್ರಣ ತಪ್ಪಿ ಬಿದ್ದಿರಬೇಕೆಂದು ಶಂಕಿಸಲಾಗಿದೆ.

108 ಆಂಬುಲೆನ್ಸ್ ಸಿಬ್ಬಂದಿಯರು ಗಾಯಾಳುವನ್ನು ಬೈಂದೂರ್ ಸಿ ಹೆಚ್ ಸಿ ಆಸ್ಪತ್ರೆಗೆ ಕರೆದುದೊಯ್ದು ಪ್ರಥಮ ಚಿಕಿತ್ಸೆಯನ್ನು ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಾಳುವಿನ ಪರಿಕರಗಳನ್ನು ವಾರುಸ್ತುದಾರರಿಗೆ ಒಪ್ಪಿಸಿ ಕರ್ತವ್ಯ ನಿಷ್ಠೆ ತೋರಿದ 108 ಅಂಬುಲೆನ್ಸ್ ಸಿಬ್ಬಂದಿಗಳು ಘಟನಾ ಸ್ಥಳದಲ್ಲಿ ಬಿದ್ದುಕೊಂಡಿದ್ದ ಮುಖೇಶ್ ಗೆ ಸೇರುದ ಹಣ ಮತ್ತೆ ಮೊಬೈಲ್ ಅನ್ನು ಆತನ ಮನೆಮಂದಿಗೆ 108 ಸಿಬ್ಬಂದಿಗಳಾದ ಇಎಂಟಿ ಪ್ರತಿಭಾ ಪೈಲೇಟ್ ಸುರೇಶ ಅವರು ಒಪ್ಪಿಸಿ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.

You cannot copy content from Baravanige News

Scroll to Top