ಬರವಣಿಗೆ ನ್ಯೂಸ್: ಸಿನಿಮಾ ಮೂಲಕ ಮನರಂಜನೆ ಕೊಡುತ್ತಾ ಬಂದಿದ್ದ ರಿಷಬ್ ಶೆಟ್ಟಿ ಹಾಗೂ ತಂಡ ಕರಾವಳಿಯ ಅತಿ ಸೂಕ್ಷ್ಮ ವಿಷಯವನ್ನು ಆಯ್ಕೆ ಮಾಡಿಕೊಂಡದ್ದಕ್ಕೆ ಒಂದು ಮೆಚ್ಚುಗೆ ಕೊಡಲೇಬೇಕು, ಹೊಂಬಾಳೆ ಬ್ಯಾನರ್ ನಲ್ಲಿ ಈ ವರ್ಷ ಬಂದಿರುವ ಅತಿ ದೊಡ್ಡ ಸಿನೆಮಾಗಳಲ್ಲಿ ಕಾಂತಾರ ಕೂಡ ಒಂದು.
![](https://i0.wp.com/wordpress-885334-3069229.cloudwaysapps.com/wp-content/uploads/2022/09/kantara_16282346622-709x1024-optimized.jpg?resize=696%2C1005&ssl=1)
ದೈವ ಪಾತ್ರಿಯ ರೂಪದಲ್ಲಿ ಮೊದಲಿಗೆ ಕಾಣಿಸಿಕೊಂಡು ಮರೆಯಾಗುವ ರಿಷಬ್ ತನ್ನ ಅದ್ಭುತ ನಟನೆಯಿಂದ ಮನಸೆಳೆಯುತ್ತಾರೆ, ತುಳು ಚಿತ್ರ ರಂಗದ ಪ್ರಮುಖರು ಮನಸ್ಸಿಗೆ ಮುದ ನೀಡುತ್ತಾರೆ. ಹಿಂದಿಯ FAMILY MAN ನಲ್ಲಿ ನೀವು ಮಿಸ್ ಮಾಡಿಕೊಂಡ ಅದೇ ಕಿಶೋರ್ ಹುಲಿ ಇಲ್ಲೂ ಘರ್ಜಿಸಿದೆ .
4 ಕಾಲಘಟ್ಟದಲ್ಲಿ ನಡೆಯುವ ಕಥೆಯಲ್ಲಿ ಕರಾವಳಿಯ ಪ್ರತ್ಯಕ್ಷ ದೈವ ಪಂಜುರ್ಲಿ ಹಾಗೂ ಗುಳಿಗ ದೈವಗಳ ಅಪೂರ್ವ ಸಂಗಮವಿದೆ. ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದು, ಹಣದ ಹೊಳೆಯನ್ನೇ ಹರಿಸಿದ್ದಾರೆ, ಹಾಡುಗಳು ಮನಸೂರೆಗೊಳ್ಳುತ್ತವೆ , ಎರಡು – ಮೂರು ಬಾರಿ ಎದೆ ಜಲ್ಲೆನಿಸಿದರೂ, ಬೆಂಕಿಯ ಜೊತೆ ಆಟವಾಡಿರುವ ದೃಶ್ಯಗಳು ಅದ್ಭುತವಾಗಿ ಮೂಡಿ ಬಂದಿದೆ. ಎಲ್ಲಾ ಭಾಷೆಯವರು ನೋಡಲೇಬೇಕಾದ ಸಿನಿಮಾದಲ್ಲಿ ದೋಷ ಹುಡುಕುವುದೆಂದರೆ ಮೊಸರಿನಲ್ಲಿ ಕಲ್ಲು ಹುಡುಕಿದಂತೆ. ರಿಷಬ್ ಶೆಟ್ಟಿಯವರ ಈ ಚಲನಚಿತ್ರ, ಕರಾವಳಿಯ ಜನರಿಗೊಂದು ಮರೆಯಲಾಗದ ಕೊಡುಗೆ . ತುಳು ಬಳಕೆ ಸಮಂಜಸವಾಗಿ ಮಾಡಿದ್ದಾರೆ. ಕ್ಲೈಮಾಕ್ಸ್ ಒಂದೆರಡು ದಿನ ನಿಮ್ಮನ್ನು ಭ್ರಮಾಲೋಕದಲ್ಲಿ ಹಿಡಿದಿಡುತ್ತದೆ. ಕಂಬಳ, ಭೂತಕೋಲದ ಪರಿಚಯದ ಯತ್ನ ಬಹುತೇಕ ಯಶಸ್ವಿಯಾಗಿದೆ .
ಒಂದೊಂದು ಪಾತ್ರಗಳು, ಒಂದೊಂದು ರೀತಿಯ ಅನುಭವ ನೀಡುತ್ತದೆ. ಎಲ್ಲೂ ಉತ್ಪ್ರೇಕ್ಷೆಯಿಲ್ಲ , ಕಥೆ ಪರಿಧಿ ದಾಟಿಲ್ಲ , ನೈಜತೆಗೆ ಹತ್ತಿರವಾದ ಸಿನೆಮಾ .
ರೇಟಿಂಗ್ 4.7/5🌟