ನಿನ್ನೆ ಡಾಕ್ಟರೇಟ್ ಪದವಿ.. ಇಂದು ಹಾವು ಕಡಿದು ದಾರುಣ ಸಾವು

ತುಮಕೂರು : ನಿನ್ನೆ ಡಾಕ್ಟರ್ ಪದವಿ ಪಡೆದ ವಿದ್ಯಾರ್ಥಿ ಇಂದು ಹಾವು ಕಡಿದು ಸಾವನ್ನಪ್ಪಿದ ಘಟನೆ ತುಮಕೂರು ನಗರದಲ್ಲಿ ನಡೆದಿದೆ.

ಕೇರಳ ಮೂಲದ ಅದಿತ್ ಬಾಲಕೃಷ್ಣನ್ ಸಾವನ್ನಪ್ಪಿದ ವಿದ್ಯಾರ್ಥಿ.

ನಿನ್ನೆ ಸಾಹೇ ವಿಶ್ವ ವಿದ್ಯಾಲಯ ಘಟಿಕೋತ್ಸವದಲ್ಲಿ ಅದಿತ್ ಬಾಲಕೃಷ್ಣನ್ ಪದವಿ ಪಡೆದಿದ್ದನು. ಆದರೆ ಸಂಜೆ ಪಾರ್ಕಿನಲ್ಲಿ ಹಾವು ಕಡಿದಿದೆ ಎನ್ನಲಾಗುತ್ತಿದೆ. ಹಾವು ಕಡಿತ ಗಮನಿಸದೇ ಮನೆಗೆ ಬಂದ ಅದಿತ್ ಬಾಲಕೃಷ್ಣನ್ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.

ಅದಿತ್ ಬಾಲಕೃಷ್ಣನ್ ನಿನ್ನೆಯಷ್ಟೆ ಎಂಬಿಬಿಎಸ್ ಪದವಿ ಪಡೆದಿದ್ದನು. ಮೃತನ ಶವ ಸಿದ್ದಾರ್ಥ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top